Friday, September 20, 2024

ಪ್ರಾಯೋಗಿಕ ಆವೃತ್ತಿ

ಆಟವಾಡುತ್ತಿದ್ದ ಬಾಲಕ ವಿ.ಸಿ. ನಾಲೆಗೆ ಜಾರಿ ಬಿದ್ದು ಸಾವು

ನೀರಿನಲ್ಲಿ‌ ಆಟವಾಡುತ್ತಿದ್ದ ವೇಳೆ ನಾಲೆಗೆ‌ ಜಾರಿ ಬಿದ್ದು ಬಾಲಕನೊಬ್ಬ ಸಾವಿಗೀಡಾಗಿರುವ ಘಟನೆ  ಮಂಡ್ಯ ತಾಲ್ಲೂಕಿನ ಹೆಚ್.ಮಲ್ಲಿಗೆರೆ ಫಾರಂ ಬಳಿಯ ವಿಶ್ವೇಶ್ವರಯ್ಯ ನಾಲೆಯಲ್ಲಿ‌ ಜರುಗಿದೆ.

ಮೂಲತಃ ಹೊನಗಾನಹಳ್ಳಿ ಗ್ರಾಮದ ಸುರೇಶ್-ವಿದ್ಯಾ ದಂಪತಿ ಪುತ್ರ ದುಷ್ಯಂತ್ ಗೌಡ (10) ವರ್ಷ ಮೃತಪಟ್ಟವರು.

ಗೊರವಾಲೆಯ ದೊಡ್ಡಪ್ಪನ ಮನೆಗೆ ಹಬ್ಬಕ್ಕೆ ತೆರಳಿದ್ದ ಬಾಲಕ ಗೆಳೆಯರೊಂದಿಗೆ ಸೋಮವಾರ ಮಧ್ಯಾಹ್ನ ಮಲ್ಲಿಗೆರೆ ಫಾರಂ ಬಳಿಯ ನಾಲೆಯಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿ ಕೊಚ್ಚಿ ಹೋಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೃತ ದೇಹ ಮಂಗಳವಾರ ಮಧ್ಯಾಹ್ನ‌ ಬಿ.ಹೊಸೂರು ಬಳಿಯ ವಿದ್ಯುತ್ ತಯಾರಿಕಾ ಘಟಕದ ಬಳಿ‌ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಪರೀಕ್ಷೆ ನಡೆಸಿ‌ ಪೋಷಕರಿಗೆ‌ ಒಪ್ಪಿಸಲಾಯಿತು.

ಈ ಕುರಿತು ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಜಿಲ್ಲಾಸ್ಪತ್ರೆಗೆ ಆಗಮಿಸಿದ ಶಾಸಕ ಎಂ.ಶ್ರೀನಿವಾಸ್ ಬಾಲಕನ‌ ಪೋಷಕರಿಗೆ ಸಂತ್ವಾನ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!