ದೇಶದಲ್ಲಿ ಮಿತಿ ಮೀರಿದ ಬೆಲೆ ಏರಿಕೆಯನ್ನು ಗೃಹಿಣಿಯೊಬ್ಬರು ಪ್ರಶ್ನಿಸುವಂತೆ ಕಾಂಗ್ರೆಸ್ ಚಿತ್ರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮತ ಕೇಳಿಕೊಂಡು ಮನೆಗೆ ಬರುವ ಬಿಜೆಪಿಗರಿಗೆ ಜನತೆ ಕೇಳಲೇಬೇಕಾದ ಪ್ರಶ್ನೆಗಳಿವು. ಇಷ್ಟೊಂದು ದುರಾಡಳಿತ, ಬೆಲೆಯೇರಿಕೆ, ಭ್ರಷ್ಟಾಚಾರ ನಡೆಸಿ ಜನತೆಯ ಮುಂದೆ ನಿಂತು ಮತ ಕೇಳಲು ಬಿಜೆಪಿಗರಿಗೆ ಯಾವ ಯೋಗ್ಯತೆಯೂ ಉಳಿದಿಲ್ಲ.
ಜನರ ಸಂಕಷ್ಟಕ್ಕೆ ಕಾಂಗ್ರೆಸ್ ಒಂದೇ ಪರಿಹಾರ. #ಕಾಂಗ್ರೆಸ್ಬರಲಿದೆಪ್ರಗತಿ_ತರಲಿದೆ pic.twitter.com/CYdbyICR5X
— Karnataka Congress (@INCKarnataka) April 19, 2023
“>
ಮನೆಗೆ ಕೇಸರಿ ಟವಲ್ ಹಾಕಿಕೊಂಡು ಓಟು ಕೇಳಿಕೊಂಡು ಬರುವ ವ್ಯಕ್ತಿಯೊಬ್ಬರಿಗೆ ಗೃಹಿಣಿಯೊಬ್ಬರು ಹಿಗ್ಗಾ ಮಗ್ಗಾ ಜಾಡಿಸುವ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಾರೆ. ಅಲ್ಲದೆ 2014ರಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 400 ರೂ. ಇತ್ತು. ಈಗ 1105 ರೂ.ಗಳಾಗಿವೆ. ಇಷ್ಟು ಬೆಲೆ ಏರಿಕೆಯಲ್ಲಿ ಸಾಮಾನ್ಯ ಜನ ಬದುಕಲು ಸಾಧ್ಯವೇ ? ಒಂದು ಕುಟುಂಬಕ್ಕೆ ಊಟ ಹಾಕುವುದು ಎಷ್ಟು ಕಷ್ಟ ಗೊತ್ತಾ ? ಎಂದು ಗೃಹಿಣಿ ಕಿಡಿಕಾರಿದ್ದಾರೆ.
ಮತ ಕೇಳಿಕೊಂಡು ಮನೆಗೆ ಬರುವ ಬಿಜೆಪಿಗರಿಗೆ ಜನತೆ ಕೇಳಲೇಬೇಕಾದ ಪ್ರಶ್ನೆಗಳಿವು. ಇಷ್ಟೊಂದು ದುರಾಡಳಿತ, ಬೆಲೆಯೇರಿಕೆ, ಭ್ರಷ್ಟಾಚಾರ ನಡೆಸಿ ಜನತೆಯ ಮುಂದೆ ನಿಂತು ಮತ ಕೇಳಲು ಬಿಜೆಪಿಗರಿಗೆ ಯಾವ ಯೋಗ್ಯತೆಯೂ ಉಳಿದಿಲ್ಲ. ಜನರ ಸಂಕಷ್ಟಕ್ಕೆ ಕಾಂಗ್ರೆಸ್ ಒಂದೇ ಪರಿಹಾರ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದೆ.