Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಚುನಾವಣಾ ವೆಚ್ಚ ವೀಕ್ಷಕರ ಸಮ್ಮುಖದಲ್ಲಿ ಅಭ್ಯರ್ಥಿಗಳ ಸಭೆ

ವರದಿ : ಪ್ರಭು ವಿ.ಎಸ್.

ವಿಧಾನಸಭೆ ಚುನಾವಣೆ ಸಂಬಂಧ ಮದ್ದೂರು ತಾಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ವೆಚ್ಚ ವೀಕ್ಷಕ ಗೌರಿಶಂಕರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು, ಎಜೆಂಟರ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಹಾಜರಿದ್ದ ಅಭ್ಯರ್ಥಿಗಳು ಮತ್ತು ಏಜೆಂಟರ್‌ಗಳು ಅಭ್ಯರ್ಥಿಗಳ ವೆಚ್ಚ ಮತ್ತು ಚುನಾವಣಾ ವೆಚ್ಚಗಳನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಿ ಕಾಲ ಕಾಲಕ್ಕೆ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ ಸೂಚಿಸಿದರು.

ಲೆಕ್ಕ ನಿರ್ವಹಣೆ ಸಂಬಂಧ ಯಾವುದೇ ಕುಂದು ಕೊರತೆಗಳಿದ್ದಲ್ಲಿ ತಮ್ಮನ್ನು ಖುದ್ಧಾಗಿ ಸಂಪರ್ಕಿಸುವಂತೆ ತಪ್ಪಿದಲ್ಲಿ ಮೊ.ಸಂ. 9141010130 ಕರೆ ಮಾಡುವಂತೆ ಏ.28ರ ಶುಕ್ರವಾರ ಲೆಕ್ಕ ತಪಾಸಣೆಯನ್ನು ನಡೆಸಲಿದ್ದು ಅಭ್ಯರ್ಥಿಗಳು ಅಗತ್ಯ ಮಾಹಿತಿಗಳೊಂದಿಗೆ ಆಗಮಿಸುವಂತೆ ತಿಳಿಸಿದರು.

ಚುನಾವಣಾ ಅಧಿಕಾರಿಗಳು ಪ್ರಕಟಿಸಿರುವ ಮಾದರಿಯಲ್ಲೇ ಖರ್ಚು ವೆಚ್ಚಗಳನ್ನು ನಿರ್ವಹಿಸುವಂತೆ ಮತ್ತು ಯಾವುದೇ ಲೋಪ ದೋಷಗಳು ಉಂಟಾಗದಂತೆ ಸಮರ್ಪಕವಾಗಿ ಮತದಾನ ನಡೆಯಲು ಅನುಕೂಲ ಕಲ್ಪಿಸಬೇಕೆಂದು ಸೂಚಿಸಿದರು.

ಈ ವೇಳೆ ಚುನಾವಣಾಧಿಕಾರಿ ನಾಗರಾಜು, ಸಹಾಯಕ ಚುನಾವಣಾಧಿಕಾರಿ, ತಹಸೀಲ್ದಾರ್ ಟಿ.ಎನ್. ನರಸಿಂಹಮೂರ್ತಿ, ಚುನಾವಣಾ ಶಿರಸ್ತೇದಾರ್ ರೂಪ, ಪವನ್‌ಕುಮಾರ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!