ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಕೆ ಆರ್ ಪೇಟೆಯ ಎಸ್.ಎಂ.ಅಲ್ಲಮಪ್ರಭು ಬೌದ್ಧರಾಷ್ಟ್ರ ಥೈಲ್ಯಾಂಡ್ ನಲ್ಲಿ ಜೂ.21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ತೆರಳಿದ್ದಾರೆ.
ಬೌದ್ಧಧರ್ಮದ ಅಧ್ಯಯನ ಮತ್ತು ಯೋಗ ಧ್ಯಾನದ ಮಹತ್ವ ತಿಳಿಯಲು ಸಿಂದಗಿಯ ಬೌದ್ಧ ಗುರು ಸಂಘಪಾಲ ಭಂತೇಜಿ ಅವರ ಜೊತೆಯಲ್ಲಿ ಹೊರಟಿರುವ ಅಲ್ಲಮಪ್ರಭು ಅವರಿಗೆ ಶಾಸಕ ಹೆಚ್ ಟಿ ಮಂಜು, ಮಾಜಿ ಸಚಿವ ನಾರಾಯಣ ಗೌಡ, ಮಾಜಿ ಶಾಸಕರಾದ ಕೆ ಬಿ ಚಂದ್ರಶೇಖರ್, ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್, ಮನ್ ಮುಲ್ ನಿರ್ದೇಶಕ ಡಾಲು ರವಿ, ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯರಾಮೇಗೌಡ ಮತ್ತಿತರರು ಶುಭ ಕೋರಿದ್ದಾರೆ.