ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳಲು ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಹಲವು ಕಾಮಗಾರಿಗಳಿಗೆ ಹೊಳಲು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಅಭಿನಂದನ್ ಹೆಚ್.ಎಲ್ ಗುದ್ದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಹೊಳಲು ಗ್ರಾಮದಲ್ಲಿ ಎನ್.ಆರ್.ಎಂ.ಎಲ್ ಸ್ವ ಸಹಾಯ ಸಂಘದ ಶೆಡ್ ನಿರ್ಮಾಣ, ಪಿರಿಯಾಪಟ್ಟಲದಮ್ಮ ದೇವಾಲಯದ ಕಲ್ಯಾಣಿ ಅಭಿವೃದ್ಧಿ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿಯ ಮುಂದುವರೆದ ಕಾಮಗಾರಿ, 3 ಲಕ್ಷ ರೂಪಾಯಿ ವೆಚ್ಚದಲ್ಲಿ ಪಟ್ಟಲದಮ್ಮ ದೇವಾಲಯದ ಮೆಟ್ಲಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಅಭಿನಂದನ್ ಮಾತನಾಡಿ, ಸರ್ಕಾರದಿಂದ ಬರುವಂತಹ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಅಭಿವೃದ್ಧಿ ಮಾಡುತ್ತೇವೆ. ನರೇಗಾ ಯೋಜನೆಯಲ್ಲಿ ಇನ್ನೂ ಹಲವಾರು ಕೆಲಸಗಳನ್ನು ಪಂಚಾಯತಿಯ ಸದಸ್ಯರು ಹಾಗೂ ಗ್ರಾಮಸ್ಥರ ಜೊತೆಗೂಡಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಲ್ಲವಿ ಹೆಚ್ ಡಿ, ಕಾರ್ಯದರ್ಶಿ ಪ್ರಕಾಶ್, ನಾರಾಯಣಪ್ಪ, ಜಯಪ್ರಕಾಶ್ ನಾರಾಯಣಿ, ರಾಜಶೇಖರ, ಸೌಭಾಗ್ಯ, ರಮ್ಯ, ಜೈ ಪ್ರಕಾಶ್, ರವಿ ಹೆಚ್ ಡಿ, ಸುಧಾ ಮತ್ತಿತರರು ಉಪಸ್ಥಿತರಿದ್ದರು.