ಮಂಡ್ಯ ತಾಲ್ಲೂಕಿನ ಹನಕೆರೆ ಬಳಿಯ ಮದ್ದೂರು ಮಾರ್ಗದಲ್ಲಿ ರೈಲಿಗೆ ಸಿಲುಕಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ನಗರದ ರೈಲ್ವೇ ಹೊರ ಠಾಣೆಯ ಪೊಲೀಸರು, ವಾರಸುದಾರರ ಪತ್ತೆಗೆ ಮನವಿ ಮಾಡಿದ್ದಾರೆ.
ಮೃತ ವ್ಯಕ್ತಿ 60 ವರ್ಷ ವಯಸ್ಸಿನವರಾಗಿದ್ದು, 5.6 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸುಮಾರು 6 ಇಂಚು ಉದ್ದದ ಕಪ್ಪು-ಬಿಳಿ ಕೂದಲು ಬಿಟ್ಟಿದ್ದು, ಬಿಳಿ ಗಡ್ಡ, ಬಿಳಿ ಮೀಸೆಯನ್ನು ಬಿಟ್ಟಿದ್ದು, ಬಲಗೈ ತೋಳಿನ ಮೇಲೆ ‘ನಾಗರಹಾವಿ’ನ ಹಚ್ಚೆಯ ಗುರುತು ಇದೆ. 2 ಜೇಬುಗಳ್ಳುಳ್ಳ ತುಂಬು ತೋಳಿನ ಶಟ್೯, ಸಿಮೆಂಟ್ ಕಲರ್ ಪ್ಯಾಂಟ್ ಧರಿಸಿದ್ದಾರೆ.
ಮೃತ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೈಸೂರು ರೈಲ್ವೇ ಪೊಲೀಸ್ ಠಾಣೆಯ ದೂ: 0821- 2516579 ಸಂಪರ್ಕಿಸಲು ಕೋರಲಾಗಿದೆ.