ಕೀರ್ತಿಶೇಷ ಸತ್ಯಭಾಮ ದೇವಿ ಬಿನ್ ಸಿದ್ದಮರಿಯಪ್ಪ ಸಮಾಜ ಸೇವಾ ಪ್ರತಿಷ್ಟಾನ, ಅನನ್ಯ ಹಾರ್ಟ್, ಮಂಡ್ಯ ಇವರಿಂದ ಸತ್ಯಭಾಮ ಸಮಾಜಸೇವಾ- ಅನನ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಆ.18ರಂದು ಮಧ್ಯಾಹ್ನ 3 ಗಂಟೆಗೆ ಮಂಡ್ಯ ಕರ್ನಾಟಕಸಂಘ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ನಡೆಯಲಿದೆ ಎಂದು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಕ್ರಮದ ದಿವ್ಯಸಾನಿದ್ಯವನ್ನು ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸುವರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಕೆ.ನಾಗಣ್ಣಗೌಡ, ಜಿಲ್ಲಾಧಿಕಾರಿ ಡಾ. ಕುಮಾರ ಉಪಸ್ಥಿತರಿರುವರು ಎಂದರು.
ಸತ್ಯಭಾಮರವರನ್ನು ಮಿಮ್ಸ್ ರೋಗ ಲಕ್ಷಣ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಸಿದ್ದೇಗೌಡ ಮಾತನಾಡುವರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ನಿವೃತ್ತ ಪಶುವೈದ್ಯಾಧಿಕಾರಿ ಡಾ. ಜಯರಾಮ್ ಕೆ.ಎಸ್ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅವರಿಗೆ ಪ್ರಶಸ್ತಿ ಪುರಸ್ಕಾರ ನೆರವೇರಿಸಲಾಗುವುದು ಎಂದರು.
ಪುರಸ್ಕೃತರ ಬಗ್ಗೆ ಡಾ.ರಾಮಕೃಷ್ಣ ಮಾತನಾಡುವರು, ಪುಸ್ತಕ ಕುರಿತು ಡಾ.ಪ್ರದೀಪ್ ಕುಮಾರ್ ಹೆಬ್ರಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್ ಕಿರಿಯ ಅಭಿಯಂತರ ಕೆಂಪರಾಜು ಜಿ.ಎನ್ ಭಾಗವಹಿಸುವರು ಎಂದರು.
ಡಾ.ಧನಂಜಯ್, ಬಾಲಕೃಷ್ಣ ತಂತ್ರಿ, ಕು.ಕನ್ನಿಕ, ಕೋಮಲ ಆನಂದ, ಷಣ್ಮುಖಯ್ಯ ತೋಟಾದ, ಉಮೇಶ್ ಬಾಬು, ಡಾ.ಮನೋಹರ್, ವೈರಮುಡಿ ಹನಿಯಂಬಾಡಿ, ತಿಮ್ಮರಾಜು, ಸುಜಾತ ರಮೇಶ್ ಹಾಗೂ ಶ್ರೀನಿವಾಸ್ ಅವರಿಗೆ ಅನನ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಕಾರಸವಾಡಿ ಮಹದೇವ್, ಮಂಗಲ ಯೋಗೇಶ್, ರಂಗಸ್ವಾಮಿ ಹಾಗೂ ಅನುಪಮಾ ಉಪಸ್ಥಿತರಿದ್ದರು.