ವರದಿ : ನ.ಲಿ.ಕೃಷ್ಣ
ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ಕುರಿತಂತೆ ಕಾವೇರಿ ಪ್ರಾದಿಕಾರದ ಆದೇಶದ ವಿರುದ್ದ ಕನ್ನಡ ಪರ ಸಂಘಟನೆಗಳು ಕರೆದಿದ್ದ ಕರ್ನಾಟಕ ಬಂದ್ ಕರೆಗೆ ಮದ್ದೂರಿನ ಮುಸ್ಲಿಂ ಸಮಾಜ ಬೆಂಬಲ ವ್ಯಕ್ತಪಡಿಸಿ ಸಾವಿರಾರು ಜನ ರಸ್ತೆಗಿಳಿದು ಪ್ರತಿಭಟನೆ ನಡೆಸಿ ದಿಕ್ಕಾರದ ಘೊಷಣೆ ಮೊಳಗಿಸಿತು.
ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆದಿದ್ದ ಬಂದ್ ಕರೆಯಲ್ಲಿ ವಿವಿಧ ಸಂಘಟನೆಗಳ ಜೊತೆಗೆ ಮುಸ್ಲಿಂ ಸಮುಧಾಯವು ಭಾಗಿಯಾಗಿ ಕಾವೇರಿ ಉಳಿವಿಗಾಗಿ ಘೊಷಣೆ ಮೊಳಗಿಸಿತು.
ಇಂದು ಮಧ್ಯಾಹ್ನ ಪಟ್ಟಣದ ಕೆಮ್ಮಣ್ಣು ನಾಲೆ ಸರ್ಕಲ್ ಬಳಿಯ ಮಸೀದಿಯಿಂದ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟ ಪ್ರತಿಭಟನಕಾರರು ಪೇಟೆ ಬೀದಿಯ ಮೂಲಕ ಮೆರವಣಿಗೆಯಲ್ಲಿ ಸಾಗಿ ಐ ಬಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ಕಾವೇರಿ ಪ್ರಾಧಿಕಾರಸ ಅವೈಜ್ಞಾನಿಕ ತೀರ್ಪಿನ ವಿರುದ್ದ ಘೊಷಣೆ ಮೊಳಗಿಸಿ ಪ್ರತಿಭಟಿಸಿದರು.
ನಂತರ ಮುಖ್ಯರಸ್ತೆಯ ಮೂಲಕ ತಹಶೀಲ್ದಾರರ ಕಛೇರಿಗೆ ತೆರಳಿ ಮನವಿ ಅರ್ಪಿಸಿ ಕಾವೇರಿ ನೀರು ಯಾವ ಕಾರಣಕ್ಕೂ ತಮಿಳುನಾಡಿಗೆ ಹರಿಯ ಬಿಡಬಾರದು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜಾಮಿಯಾ ಕಮಿಟಿಯ ಅಧ್ಯಕ್ಷ ಆದಿಲ್ ಆಲಿಖಾನ್ ಮಾತನಾಡಿ ಕಾವೇರಿಯ ಉಳಿವಿಗಾಗಿ ಮದ್ದೂರಿನ ಮುಸಲ್ಮಾನ್ ಸಮಾಜ ಎಂತಹ ತ್ಯಾಗಕ್ಕೂ ಸಿದ್ದ ಎಂದು ಗುಡುಗಿದರು.
ಪ್ರತಿಭಟನಕಾರರು ನ್ಯಾಯಯುತವಾಗಿ ಪ್ರತಿಭಟನೆಗೆ ಮುಂದಾಗಿರುವುದಕ್ಕೆ ಸರ್ಕಾರದ ತೊಂದರೆ ಸರಿಯಾದ ಕ್ರಮವಲ್ಲಾ ಎಂದ ಅವರು ಮುಸ್ಲಿಂ ಸಮಾಜ ಈ ನಾಡಿನ ಜನರ ಉಳಿವಿಗಾಗಿ ಎಂತಹ ತ್ಯಾಗ ಬಲಿದಾನಕ್ಕೂ ಸಿದ್ದ ಎಂದರು.