ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಷ್ಟ ಭರವಸೆ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮುಂದಿನ ಹೋರಾಟ ನಿರ್ಧರಿಸುವ ಉದ್ದೇಶದಿಂದ ನಡೆಯುತ್ತಿದ್ದ ಸಭೆಯು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಹಾಗೂ ರೈತ ಮುಖಂಡ ಇಂಡುವಾಳು ಚಂದ್ರಶೇಖರ್ ಅವರ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು.
ಶಾಸಕ ರವಿಕುಮಾರ್ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತಿದ್ದ ವೇಳೆ ಮೈಷುಗರ್ ಕಾರ್ಖಾನೆ ವಿಷಯ ಪ್ರಸ್ತಾಪಗೊಂಡಾಗ ಪರಸ್ಪರ ಇಬ್ಬರು ಮುಖಂಡರು ಕೈ ತೋರಿಸುತ್ತ ಕುರ್ಚಿಯ ಮೇಲೆದ್ದು ಏರು ದನಿಯಲ್ಲಿ ವಾಗ್ವಾದಕ್ಕಿಳಿದರು, ಇದರಿಂದಾಗಿ ಗದ್ದಲದ ವಾತಾವರಣ ಉಂಟಾಯಿತುಜ. ಸಭೆಯಲ್ಲಿದ್ದ ಇತರೆ ಮುಖಂಡರು ಇಬ್ಬರನ್ನು ಸಮಾಧಾನಿಸಲು ಮುಂದಾದರೂ ಆದರು ಸಹ ಮಾತಿನ ಚಕಮಕಿ ಕೆಲಕಾಲ ಮುಂದುವರೆಯಿತು. ಅನಂತರ ಇಬ್ಬರನ್ನು ಸಮಾಧಾನಪಡಿಸಲಾಯಿತು
ಸಭೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ ಬೋರಯ್ಯ, ಗುರುಪ್ರಸಾದ್ ಕೆರಗೋಡು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿ.ಬಿ.ಶಿವಕುಮಾರ್, ರೈತ ಸಂಘದ ಮುದ್ದೇಗೌಡ, ಹಲ್ಲೇಗೆರೆ ಶಿವರಾಂ, ಕನ್ನಡ ಸೇನೆ ಮಂಜುನಾಥ್, ನಾರಾಯಣ್, ದಸಂಸ ಮುಖಂಡ ಎಂ ವಿ ಕೃಷ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.