ಮಳವಳ್ಳಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಡಾ.ಕೆ ಅನ್ನದಾನಿ ಅಧಿಕಾರ ಅವಧಿಯಲ್ಲಿ ಹಾಕಲಾಗಿದ್ದ ಶಂಕುಸ್ಥಾಪನೆ ಕಲ್ಲನ್ನು ಅಧಿಕಾರಿಗಳು ತೆರುವುಗಳಿಸುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಅಂಬೇಡ್ಕರ್ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಅನ್ನದಾನಿ ಮಾತನಾಡಿ, 2007 ರಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಅಂಬೇಡ್ಕರ್ ಭವನದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾನು ವಹಿಸಿದ್ದೆ, ಅಂಬೇಡ್ಕರ್ ಭವನ ಪೂರ್ಣಗೊಂಡು ಉದ್ಘಾಟನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಿದ್ದಾರೆಂದು ಶಂಕುಸ್ಥಾಪನೆ ಕಲ್ಲನ್ನು ಹಾಕಿಸಲಾಗಿದೆ, ರಾತ್ರೋರಾತ್ರಿ ಕಲ್ಲನ್ನು ತೆಗೆಸಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ನೂರುಲ್ಲಾ, ಸಿದ್ದರಾಜು, ಪ್ರಶಾಂತ್, ನಂದಕುಮಾರ್, ಕುಮಾರ್ ಮುಖಂಡರಾದ ನಾಗರಾಜು, ಸದಾನಂದ, ಪುಟ್ಟಬುದ್ದಿ, ಆನಂದ್ ಹಾಗೂ ಸಿದ್ದಾಚಾರಿ ಸೇರಿದಂತೆ ಆನೇಕರಿದ್ದರು.