ಗಾಝಾ ಮೇಲಿನ ಬಾಂಬ್ ದಾಳಿ ಹಾಗೂ ನಾಗರಿಕರ ಹತ್ಯೆಯನ್ನು ಇಸ್ರೇಲ್ ನಿಲ್ಲಿಸಬೇಕು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಸಂದರ್ಶನದಲ್ಲಿ ಬಿಬಿಸಿಗೆ ತಿಳಿಸಿದ್ದಾರೆ.
ಬಾಂಬ್ ದಾಳಿಗೆ ಯಾವುದೇ ಸಮರ್ಥನೆಗಳಿಲ್ಲ ಎಂದು ಹೇಳಿರುವ ಮ್ಯಾಕ್ರನ್, ಕದನ ವಿರಾಮದಿಂದ ಇಸ್ರೇಲ್ ಗೆ ಲಾಭವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಬಾಂಬ್ ದಾಳಿಗೆ ”ಯಾವುದೇ ಸಮರ್ಥನೆ ಇಲ್ಲ” ಮತ್ತು ಕದನ ವಿರಾಮವು ಇಸ್ರೇಲ್ಗೆ ಲಾಭವಾಗಲಿದೆ ಎಂದು ಮ್ಯಾಕ್ರನ್ ಹೇಳಿದರು.
ಹಮಾಸ್ ದಾಳಿಯನ್ನು ಫ್ರಾನ್ಸ್ ಸ್ಪಷ್ಟವಾಗಿ ಖಂಡಿಸುತ್ತದೆ ಎಂದು ಹೇಳಿರುವ ಅವರು, ಇಸ್ರೇಲ್ ನ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿಗೆ ಮಾನ್ಯತೆ ಇದ್ದರೂ, ಗಾಝಾದಲ್ಲಿ ನಡೆಯುತ್ತಿರುವ ಬಾಂಬ್ ದಾಳಿಯನ್ನು ಸ್ಥಗಿತಗೊಳಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಮಾಸ್ನ ಸಂಘಟನೆಯ ದಾಳಿಯನ್ನು ಫ್ರಾನ್ಸ್ ಸ್ಪಷ್ಟವಾಗಿ ಖಂಡಿಸುತ್ತದೆ. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿಗೆ ಮಾನ್ಯತೆ ಇದ್ದರೂ, ಗಾಝಾದಲ್ಲಿ ನಡೆಯುತ್ತಿರುವ ಬಾಂಬ್ ದಾಳಿಯನ್ನು ಸ್ಥಗಿತಗೊಳಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ನಿಮ್ಮೊಂದಿಗೆ ಅಮೆರಿಕಾ ಮತ್ತು ಬ್ರಿಟಸ್ ಸೇರಿದಂತೆ ಇತರ ದೇಶಗಳ ನಾಯಕರೂ ಕದನ ವಿರಾಮದ ಕರೆಗೆ ದನಿಗೂಡಿಸಬೇಕೆ ಎಂಬ ಪ್ರಶ್ನೆಗೆ ಅವರು ಹಾಗೆ ಮಾಡುತ್ತಾರೆ ಎಂದು ಭಾವಿಸಿದ್ದೇನೆ” ಎಂದು ಮ್ಯಾಕ್ರನ್ ಉತ್ತರಿಸಿದ್ದಾರೆ.
ಮ್ಯಾಕ್ರನ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ವಿಶ್ವ ನಾಯಕರು ಹಮಾಸ್ನ್ನು ಖಂಡಿಸಬೇಕೇ ವಿನಃ ಇಸ್ರೇಲ್ ಅಲ್ಲ ಎಂದು ಹೇಳಿದ್ದಾರೆ.
“ಹಾಮಾಸ್ ಇಂದು ಗಾಜಾದಲ್ಲಿ ಮಾಡುತ್ತಿರುವ ಈ ಅಪರಾಧಗಳನ್ನು ನಾಳೆ ಪ್ಯಾರಿಸ್, ನ್ಯೂಯಾರ್ಕ್ ಮತ್ತು ವಿಶ್ವದ ಎಲ್ಲಿಯಾದರೂ ಮಾಡಬಹುದು” ಎಂದು ನೆತನ್ಯಾಹು ಹೇಳಿದ್ದಾರೆ.
ಪ್ಯಾರಿಸ್ನಲ್ಲಿ ಗಾಜಾ ಕುರಿತ ಮಾನವೀಯ ಸಮ್ಮೇಳನ ನಡೆದ ಒಂದು ದಿನದ ನಂತರ BBCಗೆ ಮ್ಯಾಕ್ರನ್ರ ಸಂದರ್ಶನ ಪ್ರಸಾರವಾಯಿತು.
ಆ ಶೃಂಗಸಭೆಯಲ್ಲಿ ಉಪಸ್ಥಿತರಿರುವ ಎಲ್ಲಾ ಸರ್ಕಾರಗಳು ಮತ್ತು ಏಜೆನ್ಸಿಗಳ “ಸ್ಪಷ್ಟ ತೀರ್ಮಾನ”ವೆಂದರೆ ಮೊದಲು ಮಾನವೀಯ ವಿರಾಮ, ಕದನ ವಿರಾಮಕ್ಕೆ ಹೋಗುವುದನ್ನು ಹೊರತುಪಡಿಸಿ ಬೇರೆ ಯಾವುದೇ ಪರಿಹಾರವಿಲ್ಲ, ಇದು ರಕ್ಷಿಸಲು ಅನುವು ಮಾಡಿಕೊಡುತ್ತದೆ ಎಂದು ಮ್ಯಾಕ್ರನ್ ಹೇಳಿದರು.
”ವಾಸ್ತವವಾಗಿ – ಇಂದು, ನಾಗರಿಕರು ಬಾಂಬ್ ದಾಳಿಗೆ ಒಳಗಾಗಿದ್ದಾರೆ. ವಾಸ್ತವಿಕ ಅತಿಹೆಚ್ಚು ಮಕ್ಕಳು, ಹೆಂಗಸರು, ವೃದ್ಧರು ಈ ಬಾಂಬ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಆದ್ದರಿಂದ ಅದಕ್ಕೆ ಯಾವುದೇ ಸಮರ್ಥನೆಗಳಿರುವುದಿಲ್ಲ. ಆದ್ದರಿಂದ ನಾವು ಇಸ್ರೇಲ್ಗೆ ಕದನ ನಿಲ್ಲಿಸಲು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.