ಗಾಂಜಾ ನಶೆಯಲ್ಲಿ ವ್ಯಕ್ತಿಯೊಬ್ಬ ಎದ್ವಾ ತದ್ವಾ ಜೆಸಿಬಿ ಚಲಾಯಿಸಿದ್ದರಿಂದ ಪಾನಿಪುರಿ ಗಾಡಿ, ಗೋಬಿ ಗಾಡಿ ಸೇರಿದಂತೆ ಬೀದಿ ಬದಿ ವ್ಯಾಪಾರಿಗಳ ವಸ್ತುಗಳು ದ್ವಂಸಗೊಂಡು, ಬಾಲಕಿ ಸೇರಿದಂತೆ ಮೂವರಿಗೆ ಗಾಯಗೊಂಡಿರುವ ಘಟನೆ ನಾಗಮಂಗಲದ ಬೆಳ್ಳೂರಿನಲ್ಲಿ ನಡೆದಿದೆ.
ಬಿಹಾರ ಮೂಲದ ರಾಜ್ ಕುಮಾರ್ ಗಂಜಾ ನಶೆಯಲ್ಲಿ ಜೆಸಿಬಿ ಚಲಾಯಿಸಿದ ವ್ಯಕ್ತಿ. ನಿನ್ನೆ ಸಂಜೆ ಬೆಳ್ಳೂರಿನಲ್ಲಿ ಈ ಘಟನೆ ನಡೆದಿದ್ದು, ಕುಣಿಗಲ್ ಕಡೆಯಿಂದ ನಾಗಮಂಗಲಕ್ಕೆ ಜೆಸಿಬಿಯಲ್ಲಿ ಬಂದಿದ್ದ ರಾಜ್ ಕುಮಾರ್, ನಾಗಮಂಗಲದ ನೆಲ್ಲಿಗೆರೆ ಬಳಿ ಮೊದಲು ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ, ನಂತರ ಬೆಳ್ಳೂರು ಸಂತೆಗೆ ಜೆಸಿಬಿ ನುಗ್ಗಿಸಿದ ಈತ, ಮನಸೋ ಇಚ್ಚೆ ಜೆಸಿಬಿ ಚಾಲನೆ ಮಾಡಿದ್ದಾನೆ.
ನಂತರ ಬೆಳ್ಳೂರು ಪಟ್ಟಣದ ಬೀದಿಗಳಲ್ಲಿ ಎದ್ವಾ ತದ್ವ ಜೆಸಿಬಿ ಚಾಲನೆ ಮಾಡಿದ್ದಾನೆ, ಚಾಲಕನ ಹುಚ್ಚಾಟಕ್ಕೆ ಬೆಚ್ಚಿ ಬಿದ್ದ ಬೆಳ್ಳೂರು ಜನ. ಚಾಲಕನನ್ನ ಹಿಡಿದು ಜೆಸಿಬಿ ನಿಲ್ಲಿಸಲು ಮುಂದಾದರು, ಚಾಲಕನನ್ನ ಹಿಡಿದು ಥಳಿಸಿದರು.
ಸ್ಥಳಕ್ಕೆ ಬೆಳ್ಳೂರು ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದರು, ಜಿಎಸ್ ಆಸ್ಪತ್ರೆಗೆ ಜೆಸಿಬಿ ಚಾಲಕ ರಾಜ್ ಕುಮಾರ್ ರವಾನಿಸಲಾಯಿತು.