ಮಂಡ್ಯ ಜಿಲ್ಲೆಯಿಂದ ಅಶೋಕ್ ಜಯರಾಂ ಮತ್ತು ಲಕ್ಷ್ಮಿ ಆಶ್ವಿನ್ ಗೌಡ ಅವರು ಬೆಂಗಳೂರಿನ ಖಾಸಗೀ ಹೋಟೆಲ್ ನಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದ್ದಾರೆ.
ಇದರಿಂದ ಮುಂದಿನ ಚುನಾವಣೆಯಲ್ಲಿ ಮಂಡ್ಯ ವಿಧಾನಸಭೆ ಕ್ಷೇತ್ರಕ್ಕೆ ಅಶೋಕ್ ಜಯರಾಂ ಮತ್ತು ನಾಗಮಂಗಲ ಕ್ಷೇತ್ರಕ್ಕೆ ಲಕ್ಷ್ಮಿ ಆಶ್ವಿನ್ ಗೌಡ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ.
ಇದೇ ರೀತಿ ಅತೀ ಶೀರ್ಘವಾಗಿ ಮತ್ತಷ್ಟು ಜನ ಬಿಜೆಪಿ ಸೇರಲ್ಲಿದ್ದು, ಅವರುಗಳು ಮದ್ದೂರು ಮುಂತಾದ ಕ್ಷೇತ್ರಗಳ ಅಭ್ಯರ್ಥಿ ಆಗುವ ನಿರೀಕ್ಷೆ ಇದೆ.