ರಾಜಸ್ಥಾನದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಅವರು, “ಪ್ರಧಾನಿ ಮೋದಿಯವರು ಭಾರತ್ ಮಾತಾ ಕಿ ಜೈ (ಭಾರತ ಮಾತೆಗೆ ಜಯವಾಗಲಿ) ಘೋಷಣೆ ಮಾಡುವ ಬದಲು ’ಅದಾನಿ ಜೀ ಕಿ ಜೈ’ ಎಂದು ಘೋಷಿಸಬೇಕು” ಎಂದು ಕುಟುಕಿದ್ದಾರೆ.
ಮೋದಿಯವರು ಅದಾನಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ‘ಜೈ ಭಾರತ್ ಮಾತಾ’ ಎನ್ನುತ್ತಾರೆ. ‘ಅದಾನಿ ಜಿ ಕಿ ಜೈ’ ಎಂದು ಹೇಳಬೇಕು ಎಂದಿದ್ದಾರೆ.
ಬಡವರು, ರೈತರು, ಕಾರ್ಮಿಕರ ಪಾಲ್ಗೊಳ್ಳುವಿಕೆ ಮತ್ತು ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಭಾರತ ಮಾತೆಯ ನಿಜವಾದ ವಿಜಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನ ಮಂತ್ರಿಗಳು ಎರಡು ಪ್ರತ್ಯೇಕ ‘ಹಿಂದೂಸ್ಥಾನಗಳನ್ನು’ ರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿರುವ ಅವರು, ಒಂದು ಹಿಂದೂಸ್ಥಾನ ಅದಾನಿಗಾಗಿ ಇನ್ನೊಂದು ಕಡಿಮೆ ಸವಲತ್ತು ಉಳ್ಳವರಿಗಾಗಿ ಎಂದು ತಿಳಿಸಿದ್ದಾರೆ.
ಭಾರತ ಮಾತೆಯ ಏಳಿಗೆಯು ಸಮಾಜದ ಎಲ್ಲಾ ವರ್ಗಗಳ ಒಳಗೊಳ್ಳುವಿಕೆಯ ಮೇಲೆ ಅವಲಂಬಿತವಾಗಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಜಾತಿ ಗಣತಿಯನ್ನು ನಡೆಸುವುದನ್ನು ಮೋದಿಯವರು ವಿರೋಧಿಸುತ್ತಿದ್ದಾರೆ ಎಂದಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅಂತಹ ಕ್ರಮಗಳನ್ನು ಕೈಗೊಳ್ಳುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.