ನಾಗಮಂಗಲ ತಾಲ್ಲೂಕಿನ ಪಾಲಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆ.ಡಿ.ಎಸ್ ಬೆಂಬಲಿತ ಪಿ.ಇ.ಆನಂದ ಅಧ್ಯಕ್ಷರಾಗಿ, ರಾಮಚಂದ್ರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಪಿ.ಇ.ಆನಂದ ಮಾತನಾಡಿ, ಪಕ್ಷದ ವರಿಷ್ಠ ಸುರೇಶಗೌಡ, ಪಾಲಗ್ರಹಾರ ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಮತ್ತು ಷೇರುದಾರರಿಗೆ ಧನ್ಯವಾದಗಳು, ನಿಮ್ಮೆಲ್ಲರ ಸಹಕಾರದಿಂದ ಸಂಘದ ಏಳಿಗೆಗೆ ಒಟ್ಟಾಗಿ ದುಡಿಯೋಣವೆಂದರು.
ಉಪಾಧ್ಯಕ್ಷ ರಾಮಚಂದ್ರ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ಎಂದರು
ಗ್ರಾಮ ಪಂಚಾಯತಿ ಸದಸ್ಯ ಪಿ.ಕೆ ವಿನಯ ಕುಮಾರ್ ಮಾತನಾಡಿ, ಜೆಡಿಎಸ್ ಪಕ್ಷದ ವತಿಯಿಂದ ಆಯ್ಕೆ ಆಗಿರುವಂತಹ ಇಬ್ಬರು ಗಣ್ಯರಿಗೂ ಕೃತಜ್ಞತೆಯನ್ನು ಸಲ್ಲಿಸುವೆ, ಎಲ್ಲರ ಜೊತೆಗೂಡಿ ಸಂಸ್ಥೆಯನ್ನು ಅಭಿವೃದ್ಧಿ ಮಾಡಲಿ ಎಂದರು.
ಇದೆ ಸಂದರ್ಭದಲ್ಲಿ ಜೆ.ಡಿ.ಎಸ್. ಮುಖಂಡರಾದ ಪ್ರಕಾಶ್, ಕುಮಾರ.ಪಿ.ಕೆ., ಕೃಷ್ಣಮೂರ್ತಿ, ಯೊಗೇಶ್, ಸುರೇಶ್, ರುದ್ರೇಶ್,ಮೂರ್ತಿ, ಸುಂದರ್ ಉಪಸ್ಥಿತರಿದ್ದರು.