Thursday, September 19, 2024

ಪ್ರಾಯೋಗಿಕ ಆವೃತ್ತಿ

ಮನೆ ಕುಸಿತ: ಪರಿಹಾರ ವಿತರಿದ ಅಶೋಕ್ ಜಯರಾಂ

ಇತೀಚೆಗೆ ಸುರಿದ ಭಾರಿ ಮಳೆಗೆ ಮಂಡ್ಯ ತಾಲೂಕು ಬೇಬಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹನಗನಹಳ್ಳಿ ಗ್ರಾಮದ ಪುಟ್ಟಮ್ಮನವರ ಮನೆ ಕುಸಿದು ಬಿದ್ದಿತ್ತು.

ಈ ವಿಚಾರ ತಿಳಿದ ಬಿಜೆಪಿ ಯುವ ನಾಯಕ ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್ ಇಂದು ಹನಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮನೆ ಕುಸಿತದಿಂದ ಹಾನಿಯಾಗಿರುವ ಪುಟ್ಟಮ್ಮ ಅವರಿಗೆ ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ‌ ಮಳೆಯಿಂದ ಸಾಕಷ್ಟು ಮನೆಗಳ ಗೋಡೆ ಕುಸಿದು ಸಾಕಷ್ಟು ನಷ್ಟವಾಗಿದೆ.

ನಾನು ಈ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡಿ ಇನ್ನೂ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!