ಸುಳ್ಳು ಸುದ್ದಿ ಹಬ್ಬಿಸುವ ಜನರಿಗೆ ಏನಾಗಿದೆಯೇ ಗೊತ್ತಿಲ್ಲ. ಒಬ್ಬ ವ್ಯಕ್ತಿ ಜೀವಂತವಾಗಿ ಇದ್ದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಾಕೋರು ವಿಕೃತರಾದರೆ, ಆ ಸುದ್ದಿ ಸತ್ಯವೋ, ಸುಳ್ಳೋ ಎಂದು ತಿಳಿಯದೆ ಅದನ್ನು ಎಲ್ಲೆಡೆ ವೈರಲ್ ಮಾಡೋರು ಕೂಡಾ ವಿಕೃತರೇ.ಒಬ್ಬ ವ್ಯಕ್ತಿ ಇದ್ದಾಗಲೇ ನಿಧನ ಎಂದು ಸುಳ್ಳು ಸುದ್ದಿ ಹಬ್ಬಿಸಿ ಅದೇನು ವಿಕೃತ ಆನಂದ ಪಡಿತಾರೋ… ಥೂ ಹಲ್ಕಾಗಳು…
ಮಂಡ್ಯದ ಐದು ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ.ಶಂಕರೇಗೌಡ ನಿಧನರಾಗಿದ್ದಾರೆ ಎಂಬ ಸುದ್ದಿ ಇಂದು ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿದೆ. ಈ ಹಿಂದೆಯೂ ಕೂಡ ಡಾ.ಶಂಕರೇಗೌಡ ನಿಧನ ಎಂಬ ಸುದ್ದಿಯನ್ನು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಈಗ ಎರಡನೇ ಬಾರಿ ಇಂತಹದ್ದೇ ಸುಳ್ಳು ಹರಿಯ ಬಿಟ್ಟಿದ್ದಾರೆ.ಡಾ.ಶಂಕರೇಗೌಡರಿಂದ ಚಿಕಿತ್ಸೆ ಪಡೆದು ಕೊಂಡಿರುವವರು,ಅವರ ಬಂಧು-ಬಳಗ,ಸ್ನೇಹಿತರು ಇಂತಹ ಸುಳ್ಳು ಸುದ್ದಿ ಕಂಡು ಎಷ್ಟು ಆತಂಕ ಗೊಳ್ಳುತ್ತಾರೋ ಎಂಬ ಕಾಮನ್ ಸೆನ್ಸ್ ಬೇಡ್ವಾ…ಇಂತಹ ವಿಕೃತ ಮನಸ್ಸುಗಳು ನಮ್ಮ ಸಮಾಜದಲ್ಲಿರುವುದು ಆತಂಕ ಮೂಡಿಸುತ್ತದೆ.
ನಾನು ಚೆನ್ನಾಗಿದ್ದೇನೆ, ಇಂತಹ ಸುಳ್ಳುಗಳನ್ನು ಯಾರು ಈ ರೀತಿ ಸುದ್ದಿ ಹಬ್ಬಿಸ್ತಾರೋ ಗೊತ್ತಿಲ್ಲ. ನಾನು ಆರಾಮಾಗಿದ್ದೀನಿ. ಯಾರೂ ಭಯ ಪಡಬೇಡಿ. ನಿಮ್ಮ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ ಎಂದು ಚರ್ಮ ರೋಗ ತಜ್ಞ ಡಾ.ಶಂಕರೇಗೌಡ ತಿಳಿಸಿದ್ದಾರೆ.