Thursday, September 19, 2024

ಪ್ರಾಯೋಗಿಕ ಆವೃತ್ತಿ

ಐಪಿಎಲ್ : ಮಂಡ್ಯ ಜಾನಪದ ಕಲಾವಿದರ ಕಲರವ

ಎಲ್ಲಿಯ ಐಪಿಎಲ್… ಎಲ್ಲಿಯ ಚಿಕ್ಕರಸಿಕೆರೆ ಶ್ರೀ ಕಾಲಭೈರವೇಶ್ವರ ಕಲಾತಂಡ…ಸದ್ಯಕ್ಕೆ ಏನಂತ ಅಂದ್ರೆ, ನಮ್ಮ ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಗ್ರಾಮದ ಚಿಕ್ಕಬೋರಯ್ಯ ನೇತೃತ್ವದ ಶ್ರೀ ಕಾಲಭೈರವೇಶ್ವರ ಕಲಾ ತಂಡವು ಇಂದು ಜೂ.29 ರಂದು ಸಂಜೆ ಗುಜಾರತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ 14ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ತಮ್ಮ ಕಲಾ ಪ್ರದರ್ಶನ ನೀಡುವುದಕ್ಕೆ ಆಯ್ಕೆಯಾಗಿದೆ.

ಈ ಹಿಂದೆ ಇದೇ ತಂಡವೂ ಮೂರು ಭಾರಿ ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ತನ್ನ ಕಲಾ ಪ್ರತಿಭೆಯನ್ನು ತೋರಿಸಿತ್ತು. ಚಿಕ್ಕರಸಿನಕೆರೆ ಚಿಕ್ಕಬೋರಯ್ಯನವರ ಪೂಜಾಕುಣಿತ ತಂಡ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು ಈಗ 6ನೇ ಬಾರಿ ಐಪಿಎಲ್ ಪಂದ್ಯದಲ್ಲಿ ಭಾಗವಹಿಸಿದೆ. ಈ ಕಲಾತಂಡದಲ್ಲಿ 10 ಮಂದಿ ಕಲಾವಿದರು ಭಾಗಿಯಾಗಿದ್ದು ,ಈ ತಂಡಕ್ಕೆ ಶಿವಮೊಗ್ಗದ ಕಲಾವಿದರ ತಂಡವು ಸಾಥ್ ನೀಡಲಿರುವುದು ವಿಶೇಷ.

ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಹೋಬಳಿಯ ಚಿಕ್ಕ ಬೋರಯ್ಯ, ನಂದೀಶ್ ಶೆಟ್ಟಹಳ್ಳಿ, ಸಿದ್ದೇಗೌಡ, ಮೆಣಸಗೆರೆ ನಿಂಗರಾಜು . ಎಂ ಎನ್ ರಾಜೇಶ್, ಕೊತ್ತತ್ತಿ ಸಿದ್ದಯ್ಯ, ಜೋಗಿ ಬೇವಿನಹಳ್ಳಿ, ಪುನೀತ್ ಗೌಡ, ಸಂತೆಕಸಲಗೆರೆ ಬಸವರಾಜು ಈ ತಂಡದಲ್ಲಿ ಪಾಲ್ಗೊಂಡಿದ್ದಾರೆ.

ಒಟ್ಟಾರೆ ಮಂಡ್ಯ ಕಲಾವಿದರ ಕಂಪು ದೂರದ ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಸರಿಸುತ್ತಿರುವುದು ಮಂಡ್ಯ ಜಿಲ್ಲೆಗೆ ಹಾಗೂ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!