ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿ ಡಾ.ಈ. ಸಿ. ನಿಂಗರಾಜ್ ಗೌಡ ಬುಧವಾರ ಮಧ್ಯಾಹ್ಯ 2 ಗಂಟೆಗೆ ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮೂರು ದಿನಗಳ ಹಿಂದಷ್ಟೇ ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಡಾ.ಈ.ಸಿ.ನಿಂಗರಾಜ್ ಗೌಡ ಅವರನ್ನು ಎನ್.ಡಿ.ಎ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಆದರೆ ಈ ಕ್ಷೇತ್ರವನ್ನು ಜೆಡಿಎಸ್ ವರಿಷ್ಠರು ಬಿಟ್ಟು ಕೊಡುವಂತೆ ಕೇಳಿದ ಹಿನ್ನಲೆಯಲ್ಲಿ ನಿಂಗರಾಜ್ ಗೌಡರಿಗೆ ಬಿಜೆಪಿ ಬಿ.ಫಾರಂ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ನಿಂಗರಾಜ್ ಗೌಡ ಬಿ.ಫಾರಂ ಇಲ್ಲದೆ ಇಂದು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ವೈ.ಎಚ್. ಲೋಹಿತ್ ಕುಮಾರ್, ಬಿ.ಎನ್. ಸುರೇಶ್, ಡಿ. ಶ್ರೀಕಂಠೇಗೌಡ ಮತ್ತು ಎಂ.ಎಸ್. ಉಮಾಶಂಕರ ಆರಾಧ್ಯ ಉಪಸ್ಥಿತರಿದ್ದರು.