Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮೇ 25ಕ್ಕೆ ಬುದ್ದ ವೈಶಾಖ ಪೂರ್ಣಿಮೆ ಕಾರ್ಯಕ್ರಮ

ಭಾರತೀಯ ಬೌದ್ಧ ಮಹಾಸಭಾ ಮಂಡ್ಯ ಜಿಲ್ಲೆ ಶಾಖೆ ಆಶ್ರಯದಲ್ಲಿ ಮೇ. 25ರಂದು ಬೆಳಿಗ್ಗೆ 11.30 ಗಂಟೆಗೆ ಮಂಡ್ಯದ ಡಾ.ಬಿ.ಆರ್ ಅಂಬೇಡ್ಕರ್ ಭವನದ ಸಮೀಪವಿರುವ ಬುದ್ಧಧ್ಯಾನ ಕೇಂದ್ರದಲ್ಲಿ ಭಗವಾನ್ ಬುದ್ಧರ 2568ನೇ ವೈಶಾಖ ಪೂರ್ಣಿಮಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್’ಐ ಸಂಘಟನೆಯ ಖಜಾಂಚಿ ಕೆ.ಸಿದ್ದಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯಲಿರುವ ಬುದ್ಧ ಜಯಂತಿ ಕಾರ್ಯಕ್ರಮವನ್ನು ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾಲಯದ ಬಂತೇ ಭೋದಿದತ್ತ ತೇರ ಅವರು ಉದ್ಘಾಟಿಸಲಿದ್ದು ,ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಮನೋರಕಖ್ಖಿತ ಬಂತೇಜಿ ಅವರು ಪ್ರವಚನ ನೀಡುವರು. ಬೆಂಗಳೂರಿನ ಲೋಕ ರತ್ನ ಬುದ್ಧ ವಿಹಾರದ ಧರ್ಮವೀರ ಬಂತೇಜೀ ಅವರು ದೀಕ್ಷಾ ಬೋಧನೆ ಮಾಡಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಬೌದ್ಧ ಮಹಾಸಭಾ ಮಂಡ್ಯ ಜಿಲ್ಲಾ ಶಾಖೆಯ ಅಧ್ಯಕ್ಷ ಬಿ ಅನ್ನದಾನಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾರತೀಯ ಬೌದ್ಧ ಮಹಾಸಭಾ ದಕ್ಷಿಣ ಕರ್ನಾಟಕ ಭಾಗದ ಅಧ್ಯಕ್ಷ ಎಂ.ಸಿ.ಶಿವರಾಜು, ರಾಜ್ಯ ಯುವ ಘಟಕದ ಅಧ್ಯಕ್ಷ ದರ್ಶನ್, ಮಂಡ್ಯ ಭಾರತೀಯ ಬೌದ್ಧ ಮಹಾಸಭಾ ಪೋಷಕ ಎಸ್ ಸಿದ್ದಯ್ಯ, ಅಂಬೇಡ್ಕರ್ ವಾದಿ ಬಿ ಬಿ ಲಿಂಗಣ್ಣಯ್ಯ ಭಾಗವಹಿಸಲಿದ್ದಾರೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು .

ಗೋಷ್ಠಿಯಲ್ಲಿ ಚಂದ್ರಹಾಸ್, ಸಿದ್ದರಾಜು, ಬಿ.ಅನ್ನದಾನಿ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!