Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದವ್ರ ವಿರುದ್ದ ಶಾಸಕ ಕದಲೂರು ಉದಯ್ ಕಿಡಿ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರಾಭವಗೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ತಮ್ಮ ವಿರುದ್ಧ ತೇಜೋವಧೆ ಮಾಡುತ್ತಿರುವವರ ಬಗ್ಗೆ ಶಾಸಕ ಕದಲೂರು ಉದಯ್ ಕಿಡಿ ಕಾರಿದರು.

ಮದ್ದೂರಿನಲ್ಲಿ ತಮ್ಮ ಕಚೇರಿಯಲ್ಲಿ ಮಾತನಾಡಿದ ಶಾಸಕ ಕದಲೂರು ಉದಯ್, ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿರುವವರು ಅವರ ಸ್ವಂತ ತಂದೆಗೆ ಹುಟ್ಟಿದ್ರೆ ನನ್ನ ಮುಂದೆ ಬಂದು ನೇರವಾಗಿ ತೇಜೋವಧೆ ಮಾಡ್ತಾರೆ.ಆದರೆ ಅವರೆಲ್ಲ ಅಡ್ರಸ್ ಇಲ್ಲದ ಗಿರಾಕಿಗಳ.ಎದರು ಬರದೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆದ್ದಿದ್ದಾರೆ. ಅವ್ರು ಕಾವೇರಿ ನೀರಿಗಾಗಿ ಕೆಲಸ ಮಾಡಲಿ,ಅದಕ್ಕೆ
ನಮ್ಮ ಸಹಕಾರ ಅವ್ರಿಗೆ ನೀಡುತ್ತೇವೆ.

ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ನೀಡಿದ್ದು ಬಡವರ ಏಳಿಗೆಗಾಗಿ. ನಮಗೆ ಓಟು ಹಾಕ್ಲಿ ಅಂತ ಅಲ್ಲ. ಕಾವೇರಿ ನೀರು ಬಿಟ್ಟಿಲ್ಲಾ ಅಂತ ನಮ್ಮನ್ನು ಪ್ರಶ್ನೆ ಮಾಡ್ತಾಯಿದ್ರು. ಇದೀಗ ಕುಮಾರಸ್ವಾಮಿ ಅವರೇ ಕೇಂದ್ರದಲ್ಲಿ ಸಚಿವರಾಗುತ್ತಿದ್ದು, ಕಾವೇರಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸಲಿ. ನಾವೂ ಅವರೊಂದಿಗೆ ಕೈ ಜೋಡಿಸುತ್ತೇವೆ.

ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವಿನಾಕರಣ ನಮ್ಮನ್ನು ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ಸ್ವಂತ ತಂದೆಗೆ ಹುಟ್ಟಿದ್ದರೆ ನೇರವಾಗಿ ಮಾಡಬೇಕು. ಅಡ್ರಸ್ ಇಲ್ಲದವ್ರ ತೇಜೋವಧೆಗೆ ನಾನು ತಲೆ ಕೆಡಿಸಿಕೊಳ್ಳಲ್ಲ.ನಮ್ಮ ಬಗ್ಗೆ ಗೊತ್ತಿಲ್ಲದೆ ಎಲ್ಲೋ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡೋರು ಕ್ರಾಸ್ ಬೀಡುಗಳು.ಕ್ರಾಸ್ ಬೀಡುಗಳ ವಿರುದ್ದ ನಮ್ಮ ಕಾರ್ಯಕರ್ತರು ದೂರು ನೀಡ್ತಾರೆ ಎಂದು ಕಿಡಿಕಾರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!