ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಇಂದು ಮದ್ದೂರು ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮದ್ದೂರು ತಾಲ್ಲೂಕು ಕಚೇರಿಯಲ್ಲಿದ್ದ ಸಾರ್ವಜನಿಕರಿಂದ ದೂರು, ಕುಂದು ಕೊರತೆ ಅರ್ಜಿಗಳನ್ನು ಸ್ವೀಕರಿಸಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.
ನಿಗದಿತ ಕಾಲಮಿತಿಯಲ್ಲಿ ಅರ್ಜಿಗಳು ವಿಲೇವಾರಿಯಾಗಬೇಕು. ಸಾರ್ವಜನಿಕರ ಕೆಲಸ ಮಾಡಿಕೊಡಲು ಅನಗತ್ಯ ವಿಳಂಭ ಅಥವಾ ಅವರನ್ನು ಅಲೆದಾಡಿಸುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ಕ್ರಮ ವಹಿಸುವುದಾಗಿ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ಮದ್ದೂರು ತಾಲ್ಲೂಕು ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆಯ ಬಗ್ಗೆ, ಕಡತ ವಿಲೇವಾರಿಯ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.
ಕಚೇರಿ ದುರಸ್ತಿ ಕೆಲಸ ಪ್ರಾರಂಭಕ್ಕೆ ಸೂಚನೆ
ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಮಳೆಯಿಂದ ನೀರು ಸೋರಿಕೆಯಾಗುತ್ತಿರುವ ಕಟ್ಟಡದ ಭಾಗಗಳ ಸರಿಪಡಿಸುವಿಕೆ, ಸಾರ್ವಜನಿಕರ ಶೌಚಾಲಯ, ಕಚೇರಿ ಸಿಬ್ಬಂದಿಗಳ ಶೌಚಾಲಯಯ ನಿರ್ಮಾಣ ಕಾಮಗಾರಿ, ಕಚೇರಿಯ ಕಾಂಪೌಂಡ್ ಸೇರಿದಂತೆ ಬಣ್ಣದ ಕೆಲಸಗಳನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಅವರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮದ್ದೂರು ತಾಲ್ಲೂಕು ತಹಶೀಲ್ದಾರ್ ಸೋಮಶೇಖರ್ ಉಪಸ್ಥಿತರಿದ್ದರು.
ಒಂದು ಬಾರಿ ಮದ್ದೂರ್ ಟೌನ್ ನಲ್ಲಿನ ಪಾರ್ಕ್ ಹತ್ತಿರ ಇರುವ ರುಚಿ ಹೋಟೆಲ್ ಗೇ ಭೇಟಿ ಕೊಡಿ. ಇಲ್ಲ ಆಹಾರ ಸಚಿವರು, ಬಿಬಿಎಂಪಿ ಅವರಾದ್ರು ಭೇಟಿ ಕೊಡೋದಕ್ಕೆ ಹೇಳಿ. ಸ್ವಚ್ಛತೆ ಇಲ್ಲ, ಚಪಾತಿ ಹಿಟ್ಟಿನಲ್ಲಿ ಹುಳಗಳು ನೋಡಿ ತಿನ್ನೋದಕ್ಕೆ ಮನಸೇ ಬರೋದಿಲ್ಲ ಸರ್.