Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಾಸನದಲ್ಲಿ ಮತ್ತೊಂದು ಲೈಂಗಿಕ ಹಗರಣ ಸ್ಫೋಟ| ಪ್ರತಿಷ್ಠಿತ ಕುಟುಂಬದ ಕುಡಿಯಿಂದ ಸಲಿಂಗಕಾಮದ ವಿಕೃತಿ !

ದೇಶದಲ್ಲೇ ಸುಪ್ರಸಿದ್ಧವಾದ ರಾಜಕೀಯ ಮನೆತನದ ಮತ್ತೊಂದು ಕುಡಿ ಈಗ ಮತ್ತೊಂದು ಬಗೆಯ ಲೈಂಗಿಕ ಹಗರಣ ನಡೆಸಿ ಸುದ್ದಿಯಾಗಿದ್ದಾನೆ. ಇದೂ ಸಹ ಕರ್ನಾಟಕ ಕಂಡುಕೇಳರಿಯದಂಥ ಕಾಮಕಾಂಡ. ಇಲ್ಲಿ ಸಂತ್ರಸ್ತ್ರರಾಗಿರುವುದು ಮಹಿಳೆಯರಲ್ಲ ಪುರುಷರು ಎಂಬುದಷ್ಟೇ ವ್ಯತ್ಯಾಸ.

ಹಾಸನದ ಪ್ರಭಾವಿ ಕುಟುಂಬದ ಕುಡಿ ಸಲಿಂಗ ಕಾಮಿ ಎಂಬುದು ಈಗಾಗಲೇ ಹಾಸನದಲ್ಲಿ ಜನಜನಿತವಾಗಿ ಹೋಗಿತ್ತು. ಆದರೆ ಆತ ನಡೆಸಿರುವ ಲೈಂಗಿಕ ವಿಕೃತಿಗಳು ಈಗ ಒಂದೊಂದಾಗಿ ಹೊರಗೆ ಬರುತ್ತಿವೆ.

ಹೊಸ ಕಾಂಡದ ರೂವಾರಿಗೆ ಮದುವೆಯಾಗಿತ್ತು. ಆದರೆ ಈತ ಸಲಿಂಗ ಕಾಮಿಯಾಗಿದ್ದರಿಂದ ಆ ಮದುವೆ ಬಾಳಿಕೆ ಬರಲಿಲ್ಲ. ವಿಚ್ಛೇದನದ ಸಂದರ್ಭದಲ್ಲಿ ಕೋಟಿಗಟ್ಟಲೆ ಪರಿಹಾರ ನೀಡಬೇಕಾಗಿ ಬಂದಿತು. ಎಲ್ಲಿ ಮಾನ ಹರಾಜಾಗಿ ಬಿಡುವುದೋ ಎಂದು ಆ ದೊಡ್ಡ ಕುಟುಂಬ ಹಣ ಕೊಟ್ಟು ಕೈತೊಳೆದುಕೊಂಡಿತ್ತು. ಒಂದು ಯಡವಟ್ಟು ಆದ ಮೇಲೂ ಅದೇ ಕಾಮಪಿಪಾಸುಗೆ ಮತ್ತೊಂದು ಮದುವೆ ಮಾಡಲಾಗಿತ್ತು. ಅದೂ ಕೂಡ ವಿಫಲವಾಯಿತು.

ಎರಡೂ ಮದುವೆಗಳು ಮುರಿದುಬಿದ್ದಮೇಲೆ ಈತ ಚನ್ನರಾಯಪಟ್ಟಣದ ತಮ್ಮ ಕುಟುಂಬದ ತೋಟದ ಮನೆಯೊಂದನ್ನು ತನ್ನ ಆವಾಸಸ್ಥಾನ ಮಾಡಿಕೊಂಡುಬಿಟ್ಟಿದ್ದ. ಅಲ್ಲಿ ಶುರುವಾಯ್ತು ಇವನ ಲೈಂಗಿಕ ದುಷ್ಕೃತ್ಯಗಳ ಸರಮಾಲೆ. ತೋಟದ ಮನೆಗೆ ಯುವಕರನ್ನು ಕರೆಯಿಸಿಕೊಳ್ಳುತ್ತಿದ್ದ ಈತ ರಾತ್ರಿ ಹಗಲೆನ್ನದೆ ಅವರೊಂದಿಗೆ ಕಾಮಕ್ರೀಡೆಯಾಡುತ್ತಿದ್ದ. ಇದು ಯಾವ ಹಂತಕ್ಕೆ ತಲುಪಿತ್ತೆಂದರೆ ಅವನ ಕಾಮವಾಂಛೆ ಮಿತಿಮೀರಿದಾಗ ಹುಡುಗರ ದೇಹವನ್ನು ಕಂಡಕಂಡಲ್ಲಿ ಕಚ್ಚಿಹಾಕುತ್ತಿದ್ದ. ಆ ಅಮಾಯಕ ಹುಡುಗರ ಮರ್ಮಾಂಗಗಳೂ ಅವನಿಗೆ ಆಹಾರದಂತೆ ಕಾಣುತ್ತಿತ್ತು. ಅದನ್ನೂ ಕಚ್ಚಿ ಗಾಯಗೊಳಿಸುತ್ತಿದ್ದ.

ಇಂಥ ವಿಕೃತಿಗಳಿಂದ ನೊಂದ ಯುವಕರಿಗೆ ಪುಡಿಗಾಸು ಎರಚಿ ಬಾಯಿ ಮುಚ್ಚಿಸಲಾಗುತ್ತಿತ್ತು. ಈತ ಮತ್ತಷ್ಟು ಹೊಸ ಮಿಕಗಳನ್ನು ತನ್ನ ಕಾಮದಾಟದಲ್ಲಿ ಬಳಸಿ ಬಿಸಾಡುತ್ತಿದ್ದ.

ಈಗ ಇಂಥ ದೌರ್ಜನ್ಯಕ್ಕೆ ಒಳಗಾದ ಯುವಕನೊಬ್ಬ ಪೊಲೀಸರ ಬಳಿ ದೂರು ನೀಡಿದ್ದಾನೆ. ಆತನ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದಲ್ಲೂ ಗಾಯವಾಗಿದೆ. ಪೊಲೀಸರು ಹುಡುಗನಿಂದ ದೂರು ದಾಖಲಿಸಿಕೊಂಡಿದ್ದಾರೆ. ಮುಂದೇನಾಗಲಿದೆಯೋ ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!