ಮಳವಳ್ಳಿ ತಾಲ್ಲೂಕಿನ ರಾವಣಿ ಹಾಲು ಉತ್ಪಾದಕರ ಸಹಕಾರ ಸಂಘ ದ ಅಧ್ಯಕ್ಷರಾಗಿ ಮಲ್ಲೇಶ್ ಉಪಾಧ್ಯಕ್ಷರಾಗಿ ಬಸವರಾಜು ಅವಿರೋಧ ಆಯ್ಕೆಯಾದರು.
ಇಂದು ಸಂಘದ ಆವರಣದಲ್ಲಿ ನಡೆದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಮಲ್ಲೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಆಶಾ ತಿಳಿಸಿದರು.
ನಂತರ ನೂತನ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಹಾಲು ಉತ್ಪಾದಕ ಸಂಘದ ಅಭ್ಯುದಯಕ್ಕೆ ಸಂಘದ ಸದಸ್ಯರ ಬೆಂಬಲದಿಂದ ದುಡಿಯುತ್ತೇನೆ ಮತ್ತು ಸಂಘವನ್ನು ಉತ್ತುಂಗದ ಸ್ಥಿತಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಸದಸ್ಯರಾದ ಸುರೇಶ್, ಮರಿ ಮಾದಯ್ಯ, ವೆಂಕಟೇಶ್, ನಾಗಮ್ಮ, ಶೋಭಾ, ನಾಗಮ್ಮ, ಭಾರತಿ, ನಾಗರಾಜು, ರಮೇಶ್, ಮುಖಂಡರಾದ ತಾ.ಪಂ. ಮಾಜಿ ಸದಸ್ಯ ಶಿವಲಿಂಗಯ್ಯ, ಹಾಲು ಉತ್ಪಾದಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಿವರಾಜ್, ಕೆಂಪಣ್ಣ, ಶಂಬಯ್ಯ ಸೇರಿದಂತೆ ಇತರರಿದ್ದರು.