ಮಳವಳ್ಳಿ ತಾಲ್ಲೂಕಿನ ಗಾಜನೂರು ಹಾಲು ಉತ್ಪಾದಕರ ಸಹಕಾರ ಸಂಘ ದ ಅಧ್ಯಕ್ಷರಾಗಿ ವಿಷಕಂಠೇಗೌಡ ಹಾಗೂ ಉಪಾಧ್ಯಕ್ಷರಾಗಿ ಓಗಿ ಪುಟ್ಟೇಗೌಡ ಅವಿರೋಧ ಆಯ್ಕೆಯಾದರು.
ಶನಿವಾರ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ವಿಷಕಂಠೇಗೌಡ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಓಗಿ ಪುಟ್ಟೇಗೌಡ ಇಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಆಶಾ ಘೋಷಿಸಿದರು.
ನೂತನ ಅಧ್ಯಕ್ಷ ವಿಷಕಂಠೇಗೌಡ ಮಾತನಾಡಿ, ಜೆಡಿಎಸ್ ಬೆಂಬಲದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಿದಂತಹ ಸದಸ್ಯರಿಗೆ ಗ್ರಾಮದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಹಾಲು ಉತ್ಪಾದಕ ಸಂಘದ ಅಭ್ಯುದಯಕ್ಕೆ ಸಂಘದ ಸದಸ್ಯರ ಬೆಂಬಲದಿಂದ ದುಡಿಯುತ್ತೇನೆ ಮತ್ತು ಸಂಘವನ್ನು ಉತ್ತುಂಗದ ಸ್ಥಿತಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಸದಸ್ಯರಾದ ಉಮೇಶ್, ಸುರೇಶ್, ಬಸವರಾಜು, ಹೊನ್ನೇಗೌಡ ಮುಖಂಡರಾದ ಮಹದೇವು, ಪುಟ್ಟಸ್ವಾಮಿ, ರಾಜೇಂದ್ರ, ರಾಜು, ಅಪ್ಪಣ್ಣ, ನಾಗರಾಜು ಹಾಗೂ ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು.