ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿಡಿ ಗಂಗಾಧರ್, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮಧು ಜಿ. ಮಾದೇಗೌಡರ ಹೆಸರನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದ ಸಂದರ್ಭದಲ್ಲಿ ನಾಗಮಂಗಲ ಶಾಸಕ ಸುರೇಶಗೌಡ ಡಮ್ಮಿ ಕ್ಯಾಂಡಿಡೇಟ್ ಎಂದು ವ್ಯಂಗ್ಯವಾಡಿದ್ದರು.
ನಾನು ಅಂದೇ ನಮ್ಮ ಪಕ್ಷದ ಅಭ್ಯರ್ಥಿ ಡಮ್ಮಿಯಲ್ಲ. ನಿಮ್ಮ ಪಕ್ಷದ ಅಭ್ಯರ್ಥಿಯೇ ಡಮ್ಮಿ ಎಂದು ಹೇಳಿದ್ದೆ.
ಅದಕ್ಕೆ ಫಲಿತಾಂಶದ ಮೂಲಕ ಪದವೀಧರ ಮತದಾರರು ಯಾರು ಡಮ್ಮಿ ಅಭ್ಯರ್ಥಿ ಎಂದು ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ. ನಾಗಮಂಗಲ ಶಾಸಕ ಸುರೇಶ್ ಗೌಡರೇ, ಡಮ್ಮಿ ಕ್ಯಾಂಡಿಡೇಟ್ ಯಾರೆಂದು ನಿಮಗೆ ಈಗ ಅರ್ಥವಾಗಿದೆಯಲ್ವಾ ಎಂದು ತಿರುಗೇಟು ನೀಡಿದರು.