Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಆಸ್ತಿಗಳ ಗುಳುಂ ಹಗರಣ| ಒಂದೇ ಎಫ್ಐಆರ್ ನಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು

ದೊಡ್ಡಿಪಾಳ್ಯ ನರಸಿಂಹಮೂರ್ತಿ


ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜಂಟಿಯಾಗಿ ನಡೆಸಿದ ಹಗರಣ ಇದು. ಬಿಡಿಎಗೆ ಸೇರಿದ ಬೆಂಗಳೂರು ಮಹಾನಗರದ ನಟ್ಟನಡುವೆ ಸುಮಾರು 55, 000 ಚದರ ಅಡಿ ಭೂಮಿಯನ್ನು ಡಿನೋಟಿಫೈ ಮಾಡಿ ಗುಳುಂ ಮಾಡಲಾಗಿದೆ. ಆ ಭೂಮಿಯ ಇವತ್ತಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ!


ನಾವು ನಾನಾ ರೀತಿಯ ಹಗರಣಗಳ ಆರೋಪ ಕೇಳಿದ್ದೇವೆ. ಕೆಲವು ಊಹಾಪೋಹಗಳ ಆಧಾರದಲ್ಲಿ ಕಟ್ಟಲ್ಪಟ್ಟಿರುತ್ತವೆ. ಮತ್ತೆ ಕೆಲವು ನಿಜವಾದ ಹಗರಣಗಳಾಗಿದ್ದರೂ ಸೂಕ್ತ ಸಾಕ್ಷ್ಯಾಧಾರ, ದಾಖಲೆಗಳು ಲಭ್ಯ ಇರೋದಿಲ್ಲ. ಆದರೆ ಇದು ಅಸಲಿ ಹಗರಣ ! ಯಾರೂ ನಿರಾಕರಿಸಲು ಸಾಧ್ಯವೇ ಇಲ್ಲದಂತಹ ಹಗರಣ. ಇಲ್ಲಿನ ಪ್ರತಿಯೊಂದು ಆರೋಪಕ್ಕೂ ಅಧಿಕೃತ ದಾಖಲೆಗಳಿವೆ.

ಈ ಒಂದೇ ಹಗರಣದಲ್ಲಿ ಒಬ್ಬರಲ್ಲಾ ಒಟ್ಟಿಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸಿಕ್ಕಿಬಿದ್ದಿದ್ದಾರೆ.
ಇಬ್ಬರು ಬೇರೆಬೇರೆ ಪಕ್ಷಕ್ಕೆ ಸೇರಿದವರು, ಬೇರೆಬೇರೆ ಅವಧಿಯಲ್ಲಿ ಸಿಎಂಗಳಾಗಿದ್ದವರು. ಆದರೆ ಹಗರಣ ಒಂದೇ. FIR ಕೂಡ ಒಂದೇ. ಸರ್ಕಾರಿ ಸ್ವತ್ತನ್ನು ಗುಳುಂ ಮಾಡುವ ಒಳಸಂಚಿನಲ್ಲಿ ಇಬ್ಬರೂ ಭಾಗಿಯಾಗಿ IPC Sec 120 (B) – Criminal Conspiracy ಅಪರಾಧಿಕ ಒಳಸಂಚು ಕೇಸನ್ನು ಎದುರಿಸುತ್ತಿದ್ದಾರೆ.

ನಮ್ಮ ಈದಿನ.ಕಾಂ ತನಿಖಾ ತಂಡ ಈ ಬ್ರಹ್ಮಾಂಡ ಭ್ರಷ್ಟಾಚಾರದ ಬೆನ್ನುಹತ್ತಿ ವರ್ಷಗಟ್ಟಲೆ ಪರಿಶ್ರಮ ಹಾಕಿದೆ. ನಿರಂತರ ಪ್ರಯತ್ನಗಳ ಮೂಲಕ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ಈ ರೆಡ್‌ಹ್ಯಾಂಡ್‌ ಕ್ರೈಮ್‌ ನ ಕಟುವಾಸ್ತವಗಳನ್ನು Exclusive ದಾಖಲೆಗಳ ಸಮೇತ ನಿಮ್ಮ ಮುಂದೆ ಇಡುತ್ತಿದ್ದೇವೆ.

ಈ ವಿಶೇಷ ಹಗರಣ ಆರಂಭವಾಗಿದ್ದು 2007 ನೇ ಇಸವಿಯಲ್ಲಿ. ಕುಮಾರಸ್ವಾಮಿಯವರು ಆಗಮುಖ್ಯಮಂತ್ರಿ; ಯಡಿಯೂರಪ್ಪನವರು ಉಪಮುಖ್ಯಮಂತ್ರಿ. ಅದು ಬಿಜೆಪಿ-ಜೆಡಿಎಸ್ಸಮ್ಮಿಶ್ರಸರ್ಕಾರ. ಹೀಗಿರುವಾಗ ದಿನಾಂಕ:22-08-2007 ನೇ ತಾರೀಕು ಸಿಎಂ ಕುಮಾರಸ್ವಾಮಿಯವರ ಆಫೀಸಿಗೆ ರಾಜಶೇಖರಯ್ಯಅನ್ನೋ ಹೆಸರಿನಲ್ಲಿ ಒಂದುಅರ್ಜಿಬರುತ್ತೆ. ʼನಮ್ಮ ಕುಟುಂಬದ ಇಂತಿಂಥಾ ಜಮೀನನ್ನು ಬಿಡಿಎ ಅಕ್ವೈರ್‌ ಮಾಡಿದೆ. ಅದನ್ನು ಡೀನೋಟಿಫಿಕೇಷನ್‌ಮಾಡಿಕೊಡಿʼ ಅನ್ನೋದು ಆ ಅರ್ಜಿಯ ಒಕ್ಕಣೆ.  ಆ ಅರ್ಜಿ ಬಂದದ್ದೇ ತಡ ಸಿಎಂ ಕಚೇರಿ ಅಂದು ರಾಕೆಟ್‌ ಸ್ಪೀಡ್‌ನಲ್ಲಿ ಕೆಲಸ ಮಾಡಲಿಕ್ಕೆ ಶುರು ಮಾಡಿತು.

ಅದೇದಿನ22-08-2007 ರಂದೇ ಮಾನ್ಯಮುಖ್ಯಮಂತ್ರಿಗಳು ತುರ್ತಾಗಿ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು. ಪರಿಣಾಮವಾಗಿ ಮುಖ್ಯಮಂತ್ರಿಯವರಿಗೆ ಕಾರ್ಯದರ್ಶಿಯಾಗಿದ್ದರಾಕೇಶ್‌ಸಿಂಗ್‌ ಎನ್ನುವ ಅಧಿಕಾರಿ, ನಗರಾಭಿವೃದ್ಧಿಇಲಾಖೆಯಪ್ರಧಾನಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳ ಪರವಾಗಿ ಕಳಿಸಿದ ನಿರ್ದೇಶನ ಈ ರೀತಿ ಇತ್ತು. “ಈ ಕೆಳಕಂಡ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಕೋರಿ, ಶ್ರೀ ರಾಜಶೇಖರಯ್ಯ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯನ್ನು ಅಡಕಗಳ ಸಹಿತ ಇದರಲ್ಲಿ ಲಗ್ಗತ್ತಿಸಿದೆ. ಮನವಿಯನ್ನು ಪರಿಶೀಲಿಸಿ, ಇಲಾಖಾ ಅಭಿಪ್ರಾಯದೊಂದಿಗೆ, ಕಡತವನ್ನು ಮಾನ್ಯ ಮುಖ್ಯಮಂತ್ರಿಗಳ ಅವಗಾಹನೆ  / ಆದೇಶಕ್ಕೆ ಈ ಕೂಡಲೇ ಮಂಡಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತನಾಗಿದ್ದೇನೆ.”
ಅರ್ಜಿ ಬಂದದಿನವೇʼಈ ಕೂಡಲೇ ಕಡತ ಮಂಡಿಸಿʼ ಅಂತಮುಖ್ಯಮಂತ್ರಿಕುಮಾರಸ್ವಾಮಿಯವರು ನಿರ್ದೇಶನಕೊಡಲು ಕಾರಣ ಏನಿರಬಹುದು ?ಡಿನೋಟಿಫಿಕೇಷನ್‌ ಅರ್ಜಿ ಅಂದರೆಯಾರದೋ ತಲೆ ಹೋಗೋವಂಥಾತುರ್ತು ಇರೋದಿಲ್ಲ. ಅಥವಾ ಈ ಡಿನೋಟಿಫಿಕೇಷನ್‌ರಾಜ್ಯದಜನರಹಿತಾಸಕ್ತಿ/ಬಡವರಕಾಳಜಿಯ ವಿಚಾರವಂತೂ ಅಲ್ಲವೇ ಅಲ್ಲ. ಹಾಗಿದ್ದಮೇಲೆ ಇಷ್ಟು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿದ್ದರ ಹಿಂದಿನಒಳಗುಟ್ಟು ಏನು?

ಮೊದಲಿಗೆ, ಡೀನೋಟಿಫಿಕೇಷನ್‌ಗೆ ಗುರಿಮಾಡಲಾದ ಜಮೀನಿನ ವಿವರಗಳನ್ನುನೋಡೋಣ.
ಈ ಭೂಮಿ ಬೆಂಗಳೂರು ಮಹಾನಗರದ ಗಂಗಾನಗರ ಏರಿಯಾಗೆ ಸಂಬಂಧಿಸಿದ್ದು. ಹಿಂದೆ ಇದನ್ನು ಗಂಗೇನಹಳ್ಳಿ ಅಂತ ಕರೆಯಲಾಗುತ್ತಿತ್ತು. ಮೇಕ್ರಿ ಸರ್ಕಲ್‌ ದಾಟಿ ಏರ್‌ಪೋರ್ಟ್‌ ರಸ್ತೆಯಲ್ಲಿ ಹೊರಟರೆ ಬಲಗಡೆಗೆ ಸಿಬಿಐ ಆಫೀಸ್‌ ಕಾಣಿಸುತ್ತೆ ನೋಡಿ ಅದೇಗಂಗೇನಹಳ್ಳಿ. ಈ ಗಂಗೇನಹಳ್ಳಿಸರ್ವೆನಂ. 7/1B, 7/1C ಮತ್ತು 7/1D ಈ ಮೂರು ಸರ್ವೆನಂಬರ್‌ಗಳಿಗೆ ಸಂಬಂಧಿಸಿದ ಒಟ್ಟು01 ಎಕರೆ 11ಗುಂಟೆ ಜಮೀನು ಈ ಹಗರಣದಲ್ಲಿ ಸಿಕ್ಕಿಬಿದ್ದಿದೆ. ಸುಮಾರು 55,000 ಚದರ ಅಡಿ ಭೂಮಿ. ಇದರಅಕ್ಕಪಕ್ಕದಲ್ಲೇಮಂತ್ರಿಗಳ ಮನೆಗಳಿವೆ. ಮಾಜಿಮುಖ್ಯಮಂತ್ರಿಗಳಾದ ಎಸ್‌ಆರ್‌ ಬೊಮ್ಮಾಯಿ, ಗುಂಡೂರಾವ್‌, ವೀರಪ್ಪ ಮೊಯಿಲಿ, ಧರಂಸಿಂಗ್‌ ಮುಂತಾದವರ ಬಂಗಲೆಗಳಿವೆ. ಎಂಎಲ್‌ಎ ಲೇಔಟ್‌ ಅಂತ ಕರೆಯಲಾಗುವ ಪ್ರತಿಷ್ಟಿತ ಬಡಾವಣೆ ಇದಕ್ಕೆ ಅಂಟಿಕೊಂಡಿದೆ. ಇದು ಆರ್‌ಟಿನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜಮೀನು. ಹೀಗೆ ಬೆಂಗಳೂರು ಮಹಾನಗರದ ನಟ್ಟನಡುವೆ ಬಹಳಪ್ರತಿಷ್ಟಿತಬಡಾವಣೆಯ ಮಧ್ಯೆ ಇರುವಈ ಜಮೀನಿನ ಮಾರ್ಕೆಟ್‌ ವ್ಯಾಲ್ಯೂನೂರಾರುಕೋಟಿ ! ಮಾಧ್ಯಮಗಳಲ್ಲಿ ಈ ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ ಆಗಾಗ ಒಂದು ಚುಟುಕು ಸುದ್ದಿಯಾಗಿ ಬಂದು ಹಾಗೇ ಮರೆಯಾಗಿಬಿಟ್ಟಿದೆ. ಕುಮಾರಸ್ವಾಮಿಯವರು ಡಿನೋಟಿಫಿಕೇಷನ್‌ ಕೈಗೆತ್ತಿಕೊಂಡ ಈ ಜಮೀನಿನ ವಸ್ತುಸ್ಥಿತಿ ಏನಾಗಿತ್ತು ಎಂಬುದನ್ನು ನೋಡೋಣ.

ಮೂಲತಃ ಈಜಮೀನುತಿಮ್ಮಾರೆಡ್ಡಿ, ನಾಗಪ್ಪಅಲಿಯಾಸ್‌ ನಾಗಪ್ಪರೆಡ್ಡಿ ಮತ್ತು ಮುನಿಸ್ವಾಮಪ್ಪಎನ್ನುವವರಿಗೆ ಸೇರಿದ್ದು. ಮೂರು ಜನರಿಗೂ ಸೇರಿದ ತಲಾ17ಗುಂಟೆಪ್ರಕಾರ ಒಟ್ಟು ಒಂದು ಎಕರೆ ಹನ್ನೊಂದು ಗುಂಟೆ ಜಮೀನನ್ನು16-03-1976 ರಲ್ಲಿ ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತು. ಪ್ರಾಥಮಿಕ ಅಧಿಸೂಚನೆ, ಜಮೀನಿನಸರ್ವೆ, ದಾಖಲೆಗಳ ಪರಿಶೀಲನೆ, ಭೂಮಿಗೆ ಸಂಬಂಧಿಸಿದವರ ಆಕ್ಷೇಪಣೆಗಳ ಆಲಿಕೆ, ಪರಿಹಾರ ಮೊತ್ತ ನಿಗದಿ – ಹೀಗೆ ಸುಮಾರುಒಂದುವರ್ಷಎಂಟುತಿಂಗಳಪ್ರಕ್ರಿಯೆನಡೆದು 08-12-1977 ರಗೆಜೆಟ್‌ನಲ್ಲಿಅಂತಿಮ ಅಧಿಸೂಚನೆಪ್ರಕಟಆಗಿದೆ. ನಂತರದ ದಿನಗಳಲ್ಲಿಈ ಭೂಮಿಯ ಮೇಲಿನ ಹಕ್ಕಿಗಾಗಿ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳುನಡೆದಿವೆ. ಅಂತಿಮವಾಗಿ ಹನ್ನೆರಡು ವರ್ಷಗಳ ನಂತರ21-04-1988ರಲ್ಲಿಭೂಸ್ವಾಧೀನಕಾಯ್ದೆಯಸೆಕ್ಷನ್‌ 16 (2) ರಅಡಿಯಲ್ಲಿಫೈನಲ್‌ನೋಟಿಫಿಕೇಷನ್‌ಪ್ರಕಟ ಆಗಿದೆ.

ಈಸೆಕ್ಷನ್‌16(2)ಫೈನಲ್‌ ನೋಟಿಫಿಕೇಷನ್‌ ಅಂದರೆ ಯಾವುದೇ ಹಕ್ಕುಸ್ವಾಮ್ಯ ಅಥವಾ ಯಾವುದೇ ಋಣಭಾರಗಳಿಲ್ಲದೆ ಸದರಿ ಸ್ವತ್ತುಸಂಪೂರ್ಣವಾಗಿಸರ್ಕಾರದ ಸ್ವಾಧೀನ ಮತ್ತು ಒಡೆತನದಲ್ಲಿದೆ ಎಂದು ಘೋಷಿಸುವ ಕಾನೂನು. ಹೀಗೆ 1988ರಲ್ಲಿಈ ಭೂಮಿ ಸಂಪೂರ್ಣ ಸರ್ಕಾರದ ಸ್ವತ್ತು ಅಂತ ಘೋಷಣೆಯಾದ 19ವರ್ಷಗಳ ನಂತರ, 1976 ರಲ್ಲಿ ಪ್ರಾಥಮಿಕ ಅಧಿಸೂಚನೆಯಾದ 31 ವರ್ಷಗಳ ನಂತರ2007 ರಲ್ಲಿಮಾನ್ಯಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಶೇಖರಯ್ಯ ಅನ್ನೋ ಹೆಸರಿನಲ್ಲಿ ಅರ್ಜಿ ಪಡೆದು ಈ ಡೀನೋಟಿಫಿಕೇಷನ್‌‌ ʼಫೈಲ್‌ ನಂ. ಯುಡಿಡಿ 424 ಬೆಂಭೂಸ್ವಾ 2007ʼಸೃಷ್ಟಿ ಮಾಡಿ, ʼಈ ಕೂಡಲೇ ದಾಖಲೆಗಳನ್ನು ಸಿದ್ಧಪಡಿಸಿ ಕೊಡಿʼಅಂತಅದೇ ದಿನ ಅಧಿಕಾರಿಗಳಿಗೆನಿರ್ದೇಶನ ಕೊಡ್ತಾರೆ. ಈ 01 ಎಕರೆ 11 ಗುಂಟೆ ಜಮೀನಿನ ಬಗ್ಗೆ ಮಾನ್ಯ ಕುಮಾರಸ್ವಾಮಿಯವರಿಗೆ ಇಷ್ಟೊಂದು ಆಸಕ್ತಿ, ಆತುರ ಯಾಕೆ ? ಅಸಲಿ ಸೀಕ್ರೆಟ್‌ ಇರೋದೇ ಇಲ್ಲಿ. ಆ ಸೀಕ್ರೆಟ್‌ ಡೀಲಿಂಗ್‌ಏನು ಅಂತ ನೋಡೋಣ.

10-09-2007 ರಲ್ಲಿರಿಜಿಸ್ಟರ್‌ ಆದ ಈ ಜಿಪಿಎ ನೋಡಿ. ಅಂದರೆ ಮಾನ್ಯ ಕುಮಾರಸ್ವಾಮಿಯವರು 22-08-2007ರಂದು ಒಂದೇ ದಿನದಲ್ಲಿ ಡಿನೋಟಿಫಿಕೇಷನ್‌ ಕಡತ ಓಪನ್‌ ಮಾಡಿದ್ದರಲ್ಲಾ, ಅದಾದ ಕೇವಲ 18 ದಿನಗಳಲ್ಲಿ ಈ ಜಿಪಿಎ ರಿಜಿಸ್ಟರ್‌ ಆಗಿದೆ. ಇದೇ 01 ಎಕರೆ 11 ಗುಂಟೆ ಜಮೀನಿನ ಮೂಲ ಮಾಲಿಕರಾದ ತಿಮ್ಮಾರೆಡ್ಡಿ, ನಾಗಪ್ಪ, ಮುನಿಸ್ವಾಮಪ್ಪ ಇವರುಗಳವಾರಸುದಾರರಿಂದ, ಅಂದರೆ ಅವರಮಕ್ಕಳುಮೊಮ್ಮಕ್ಕಳು ಒಟ್ಟು 21ಜನರಿಂದ ಶ್ರೀಮತಿ ವಿಮಲ ಎನ್ನುವವರು ಈಜಿಪಿಎ ಪಡೆದುಕೊಳ್ಳುತ್ತಾರೆ. ಅದು ಮಾಮೂಲಿ ಜಿಪಿಎ ಅಲ್ಲ;ರಿಜಿಸ್ಟರ್ಡ್‌ ಜಿಪಿಎ.ಈ ವಿಮಲ ಅನ್ನೋರು ಯಾರು ಅನ್ನೋದು ಪ್ರಶ್ನೆ. ಈ ವಿಮಲ ಬೇರೆ ಯಾರೋ ಅಲ್ಲ. ಕುಮಾರಸ್ವಾಮಿಯವರ ಸ್ವಂತ ಅತ್ತೆ. ಇವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರ ತಾಯಿ. ಕುಮಾರಸ್ವಾಮಿಯವರ ಆಸಕ್ತಿ, ಆತುರ, ವೇಗ ಇವೆಲ್ಲಾ ಯಾಕೆ ಅಂತ ಇನ್ನೂ ಬಿಡಿಸಿ ಹೇಳಬೇಕಿಲ್ಲ.

ಒಂದು ಕಡೆ ವಿಮಲ ಅತ್ತೆ ಜಿಪಿಎ ಪಡೆದುಕೊಂಡುಆ ಜಮೀನನ್ನುನಿಯಂತ್ರಣಕ್ಕೆತೆಗೆದುಕೊಳ್ಳುತ್ತಾರೆ.ಇನ್ನೊಂದು ಕಡೆ ಅಳಿಯ ಸಿಎಂ ಒಂದು ಅರ್ಜಿ ತಗೊಂಡುಡಿನೋಟಿಫಿಕೇಷನ್‌ ಕಡತ ಓಪನ್‌ ಮಾಡ್ತಾರೆ. ಹೇಗಿದೆ ಅರೇಂಜ್‌ಮೆಂಟ್‌?

ಈ ಡೀನೋಟಿಫಿಕೇಷನ್‌ಅರ್ಜಿಯಲ್ಲಿಇನ್ನೊಂದುಕುತೂಹಲಕರಅಂಶಇದೆ.
ಕುಮಾರಸ್ವಾಮಿಯವರು ಈಡೀನೋಟಿಫಿಕೇಶನ್‌ಅರ್ಜಿತೆಗೆದುಕೊಂಡಿದ್ದುರಾಜಶೇಖರಯ್ಯಮತ್ತಿತರರು ಎಂಬ ಹೆಸರಿನಲ್ಲಿ. ಆದರೆ ಅರ್ಜಿಯ ಕೊನೆಯಲ್ಲಿ ಒಂದೇ ಸಹಿ ಇದೆ.ಮತ್ತಿತರರು ಯಾರೋ ಪತ್ತೆಯಿಲ್ಲ. ಹೋಗಲಿ, ಆ ಅರ್ಜಿಯಲ್ಲಿಏನಿದೆ ನೋಡೋಣ.ʼಗಂಗೇನಹಳ್ಳಿ ಗ್ರಾಮದ ಸರ್ವೆ ನಂಬರ್‌ ಸೋ ಅಂಡ್‌ ಸೋ ಜಮೀನು ನಮ್ಮ ಸ್ವಾಧೀನಾನುಭವದಲ್ಲಿರುತ್ತದೆ… ಸದರಿ ಜಮೀನನ್ನು ಅಭಿವೃದ್ಧಿ ಪಡಿಸಲು ನಮ್ಮ ಕುಟುಂಬದ ಸದಸ್ಯರು ಇಚ್ಚಿಸಿರುವ ಹಿನ್ನಲೆಯಲ್ಲಿ ಪ್ರಾಧಿಕಾರದ ಭೂ ಸ್ವಾಧೀನ ನಡವಳಿಯಿಂದ ಕೈಬಿಡಬೇಕೆಂದುʼಕೋರಲಾಗಿದೆ.

ಆದರೆ ಈಜಮೀನನ್ನುಜಿಪಿಎಕೊಟ್ಟಿರುವ ಆ ಜಮೀನಿನ 21 ಜನ ವಾರಸುದಾರರಲ್ಲಾಗಲಿಅಥವಾ ಸರ್ಕಾರದ ಇತರೆದಾಖಲೆಗಳಲ್ಲಾಗಲಿ ರಾಜಶೇಖರಯ್ಯಅನ್ನೋಹೆಸರೇಇಲ್ಲ. ಈರಾಜಶೇಖರಯ್ಯನಿಗೂಆಕುಟುಂಬಕ್ಕೂಸಂಬಂಧವೇಇಲ್ಲ! ಖಚಿತವಾಗಿ ಹೇಳಬಹುದು ಇದೊಂದುಬೇನಾಮಿಅಪ್ಲಿಕೇಷನ್‌!!ಕುಮಾರಸ್ವಾಮಿಯವರು ಡಿನೋಟಿಫಿಕೇಷನ್‌ಕಡತ ಸೃಷ್ಟಿ ಮಾಡಲಿಕ್ಕಾಗಿರಾಜಶೇಖರಯ್ಯಅನ್ನೋಹೆಸರಲ್ಲಿಒಂದುಅರ್ಜಿ ಸೃಷ್ಟಿಸಿ ಈಹಗರಣಕ್ಕೆ ಶಂಖುಸ್ಥಾಪನೆ ಮಾಡಿದ್ದಾರೆ, ಅಷ್ಟೇ.

ಸರಿ… ಕುಮಾರಸ್ವಾಮಿಯವರೇನೋ ಬಹಳ ಅವಸರದಲ್ಲಿದ್ದರು. ಆದರೆಅಧಿಕಾರಿಗಳು ?
ಅಧಿಕಾರಿಗಳು ಕಾನೂನುಪ್ರಕಾರವೇಕೆಲಸಮಾಡಬೇಕು. ಯಾವುದೇಕಡತವನ್ನು ಕಾನೂನುಬದ್ಧವಾಗಿದೆಯೋ ಇಲ್ಲವೋ ಅಂತಪರಿಶೀಲನೆ ಮಾಡಿಯೇಸಹಿಹಾಕಬೇಕು.
ಅಧಿಕಾರಿಗಳು ಕಾನೂನುಮೀರಿದರೆಸಿಕ್ಕಿಬಿದ್ದು, ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ.ಮಿತಿಮೀರಿದರೆ ಜೈಲುಪಾಲಾಗುವ ಸಂಭವ ಇರುತ್ತದೆ. ಹೀಗೆ ಮುಂದಿನ ಪರಿಣಾಮದ ಅರಿವು ಇರೋದರಿಂದ ಅಧಿಕಾರಿಗಳು ಈಕಡತದ ಬಗ್ಗೆಕಾನೂನು ಪ್ರಕಾರಸ್ಪಷ್ಟ ಅಭಿಪ್ರಾಯ ಕೊಟ್ಟಿದ್ದಾರೆ.

ಆಯಕಟ್ಟಿನ ಮೇಲೆ ಕಣ್ಣುಹಾಕಿದ್ದ ಕುಮಾರಸ್ವಾಮಿಯವರು ಅಷ್ಟು ಸುಲಭಕ್ಕೆ ಬಿಟ್ಟುಕೊಟ್ಟಿಲ್ಲ. ಮತ್ತೊಮ್ಮೆ ನಿರ್ದೇಶನ ಕೊಡುತ್ತಾರೆ.

ಅರ್ಜಿದಾರರು ಮತ್ತು ಬಿಡಿಎ ಗೆ ನೋಟೀಸ್‌ ಜಾರಿ ಮಾಡಿ,  ವಿಚಾರಣೆ ನಡೆಸಿ ಅಂತ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಾಕೀತು ಮಾಡುತ್ತಾರೆ. ಅಂದಿನ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದವರು ಜ್ಯೋತಿ ರಾಮಲಿಂಗಂ ಎಂಬ ಅಧಿಕಾರಿ. ಅವರು ಕುಮಾರಸ್ವಾಮಿಯವರ ಒತ್ತಡಕ್ಕೆ ಸೊಪ್ಪು ಹಾಕದೆ ಬಹಳ ಸ್ಪಷ್ಟವಾದ ಮಾತುಗಳಲ್ಲಿ “…This is not a fit case for consideration”ಅಂತ ಬರೆದಿದ್ದಾರೆ. ʼಭೂಸ್ವಾಧೀನ ಕಾಯ್ದೆ ಸೆಕ್ಷನ್‌ 16(2) ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಸದರಿ ಜಮೀನನ್ನು ಡಿನೋಟಿಫೈ ಮಾಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಬರೆದಿದ್ದಾರೆ.

‌ಜ್ಯೋತಿರಾಮಲಿಂಗಂರವರು ಈ ಕಡತದ ಮೇಲೆ ಹೀಗೆ ಖಚಿತ ಅಭಿಪ್ರಾಯಬರೆದದ್ದು09-10-2007 ರಂದು. 09-10-2007ಕುಮಾರಸ್ವಾಮಿಯವರಜೀವನದಲ್ಲಿಬಹಳದುಃಖದದಿನ. ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದವರು ಹುದ್ದೆಗೆ ರಾಜೀನಾಮೆ ಕೊಟ್ಟ ದಿನ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಏನೆಂದರೆ ಕುಮಾರಸ್ವಾಮಿಯವರು ಕೊನೇಘಳಿಗೆವರೆಗೂಈಡಿನೋಟಿಫಿಕೇಶನ್‌ ಫೈಲ್ಪುಶ್‌ಮಾಡಲಿಕ್ಕೆ ಪ್ರಯತ್ನಿಸುತ್ತಿದ್ದರು ಎಂಬುದು. ಆದರೆಯಶಸ್ವಿಯಾಗೋಲ್ಲ.ಪಾಪ! ಆ ದಿನವೇರಾಜೀನಾಮೆಕೊಟ್ಟು ಗದ್ದುಗೆ ಬಿಟ್ಟು ಇಳಿಯುತ್ತಾರೆ.
ರಾಜೀನಾಮೆ ಕೊಡುವುದು ಅನಿವಾರ್ಯವಾಗಿತ್ತು. ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ20 : 20ಸರ್ಕಾರಮಾಡಿಕೊಂಡಿದ್ದರು. ಇವರ 20 ತಿಂಗಳು ಅಧಿಕಾರಾವಧಿ ಮುಗಿದಿತ್ತು.ಬಿಜೆಪಿಗೆ ಅಧಿಕಾರಬಿಟ್ಟುಕೊಡಬೇಕಾಗಿತ್ತು.ಅಧಿಕಾರಬಿಟ್ಟುಕೊಡದೇಜಗ್ಗಾಡುತ್ತಿದ್ದರು. ಎರಡೂಪಕ್ಷಗಳಮಧ್ಯೆಅಧಿಕಾರಕ್ಕಾಗಿ ಭಾರೀ ಬೀದಿಜಗಳ ನಡೆದಿತ್ತು. ಆಕಚ್ಚಾಟದನಡುವೆಯೇಈಡಿನೋಟಿಫಿಕೇಷನ್‌ಫೈಲ್‌ಓಡಾಡುತ್ತಿತ್ತು. ಅಂತಿಮವಾಗಿನಗರಾಭಿವೃದ್ಧಿ ಇಲಾಖೆಯಪ್ರಧಾನಕಾರ್ಯದರ್ಶಿ ಆಗಿದ್ದ ಜ್ಯೋತಿ ರಾಮಲಿಂಗಂರವರುಸ್ಪಷ್ಟವಾಗಿನಿರಾಕರಣೆಮಾಡಿ This is NOT a fit case ಅಂತ ಮುಖದಮೇಲೆ ಹೊಡೆದಂತೆಹೇಳಿದ ಮೇಲೆ ಕುಮಾರಸ್ವಾಮಿಯವರಿಗೆ ಬೇರೆ ಗತ್ಯಂತರವಿರಲಿಲ್ಲ.

20 : 20 ಸರ್ಕಾರ ಬಿದ್ದುಹೋದ ನಂತರ ಆರು ತಿಂಗಳ ಕಾಲ ರಾಜ್ಯಪಾಲರ ಆಡಳಿತ ಇತ್ತು. ಆ ಅವಧಿಯಲ್ಲಿ ಈ ಕಡತದ ಪ್ರಕ್ರಿಯೆ ಗಮನಿಸಿದರೆ ಕುಮಾರಸ್ವಾಮಿ ಸೃಷ್ಟಿ ಮಾಡಿದ್ದು ಎಂಥಾ ಫೈಲ್‌ ಎಂಬ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗುತ್ತದೆ.

ಆಗ ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ರವೀಂದ್ರನಾಥ್‌ ಎಂಬ ಅಧಿಕಾರಿಯ ಟಿಪ್ಪಣಿ ನೋಡೋಣ.



“ಮುಂದುವರಿದು ಸದರಿ ಪ್ರಕರಣದಲ್ಲಿ ಈಗಾಗಲೇ ಪ್ರಾಧಿಕಾರದಿಂದ ವರದಿಯಾದಂತೆ 16(2)ರ ಪ್ರಕ್ರಿಯೆ ಮುಗಿದಿರುವುದರಿಂದ ಮತ್ತು ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಭೂಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ಕೈಬಿಡುವ ಬಗ್ಗೆ ಪರಿಶೀಲಿಸಲು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಡಿನೋಟಿಫಿಕೇಷನ್‌ ಸಮಿತಿ ಸಭೆಯಲ್ಲಿಯೂ ಕೂಡಾ 16(2) ಪ್ರಕ್ರಿಯೆ ಪೂರ್ಣಗೊಂಡಿರುವ ಪ್ರಕರಣಗಳನ್ನು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಹಾಗೂ 16(2) ಪ್ರಕ್ರಿಯೆ ಮುಗಿದ ನಂತರ ಪ್ರಾಯಶಃ ಮೇಲ್ಮನವಿಯನ್ನು ಪರಿಗಣಿಸಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲದ ಕಾರಣ ಈ ರೀತಿ ಪ್ರಕರಣವನ್ನು ಆಲಿಸುವುದು (Hearing) ಸಮರ್ಥನೀಯವಲ್ಲ. ಮುಂದೆ ಈ ರೀತಿಯ ಅಡಹಾಕ್‌ ವ್ಯವಸ್ಥೆಯು ಖಾಯಂ ಆಗಿ ಪರಿವರ್ತನೆಗೊಂಡು ಎಲ್ಲಾ ಪ್ರಕರಣಗಳನ್ನೂ ಈ ರೀತಿ ಹಿಯರಿಂಗ್‌ ನಡೆಸಬೇಕಾಗುವ ಸಂಭವವು ಸೃಷ್ಟಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ್ರಸ್ತುತ ಪ್ರಕರಣದಲ್ಲಯೂ ಕೂಡಾ ಈಗಾಗಲೇ 16(2) ಪ್ರಕ್ರಿಯೆಯು ಪೂರ್ಣಗೊಂಡಿರುವುದರಿಂದ ಸದರಿ ವಿಷಯವನ್ನು ಮಾನ್ಯ ರಾಜ್ಯಪಾಲರ ಸಲಹೆಗಾರರ ಅವಗಾಹನೆಗೆ ಮಂಡಿಸಿ ಈ ವಿಷಯವನ್ನು ಮುಕ್ತಾಯಗೊಳಿಸಬಹುದು.”

ಕುಮಾರಸ್ವಾಮಿ ಸೃಷ್ಟಿ ಮಾಡಿದ ಡಿನೋಟಿಫಿಕೇಷನ್‌ ಕಡತದ ಯೋಗ್ಯತೆಯ ಬಗ್ಗೆ ಬರೆದಿರುವ ಅತ್ಯಂತ ಖಚಿತವಾದ ಅಭಿಪ್ರಾಯ ಇದು.  ರವೀಂದ್ರನಾಥ್‌ ಅವರ ಟಿಪ್ಪಣಿಯ ನಂತರದಲ್ಲಿ ಈ ಕಡತವನ್ನು ಪರಿಶೀಲಿಸಿದ ಅಧಿಕಾರಿಗಳು “ಈ ಕಡತವನ್ನು ಮುಕ್ತಾಯಗೊಳಿಸಬಹುದು”ಎಂದು ಶಿಫಾರಸ್ಸು ಮಾಡಿರುವುದನ್ನು ದಾಖಲೆಗಳಲ್ಲಿ ಕಾಣಬಹುದು.

ಆರುತಿಂಗಳರಾಜ್ಯಪಾಲರಆಡಳಿತದ ನಂತರ 2008 ರಮೇತಿಂಗಳಲ್ಲಿಯಡಿಯೂರಪ್ಪನವರಸರ್ಕಾರಬಂತು. ಆಮೇಲೆ ಈ ಕಡತ ಸಂಖ್ಯೆ. 424ರ ಕತೆ ಏನಾಯ್ತು ಅನ್ನೋದು ಕುತೂಹಲ ಮೂಡಿಸುತ್ತದೆ. ರಾಜಕೀಯ ಅನ್ನೋದು ಎಷ್ಟು ವಿಚಿತ್ರ ಕ್ಷೇತ್ರಅಂತ ನೋಡಿ. ಒಪ್ಪಂದದ ಪ್ರಕಾರ ಅಧಿಕಾರ ಬಿಟ್ಟುಕೊಡಲಿಲ್ಲ ಅಂತ ಬಿಜೆಪಿ ಮತ್ತು ಜೆಡಿಎಸ್‌ನವರುಯಾವಮಟ್ಟದಲ್ಲಿಬೀದಿಕಚ್ಚಾಟನಡೆಸಿದ್ದರು ನೆನಪಿಸಿಕೊಳ್ಳಿ. ಯಡಿಯೂರಪ್ಪ ಮತ್ತುಕುಮಾರಸ್ವಾಮಿ ಪರಸ್ಪರಏನೇನು ಬೈದಾಡಿಕೊಂಡಿದ್ದರು ಅಂತನೆನಪಿಸಿಕೊಂಡರೆವಾಕರಿಕೆಬರುತ್ತೆ. ರಾಜಕೀಯಅಂದ್ರೆಹೀಗೇನಾ? ಇಷ್ಟುಕೆಳಹಂತಕ್ಕೆಇಳೀತಾರಾಅನಿಸುತ್ತೆ.
ಇನ್ಯಾವತ್ತೂ ಇವರುಪರಸ್ಪರಮುಖಕೊಟ್ಟುಮಾತಾಡೋದಿಲ್ಲವೇನೋ !?
ಪರಸ್ಪರಹೊಡೆದಾಡ್ಕೊಳ್ತೇರೇನೊಅನ್ನೊ ಅಷ್ಟುಪರಸ್ಪರದ್ವೇಷ, ಆಕ್ರೋಶಕಾಣತ್ತೆ.
ಇದೆಲ್ಲಾತೆರೆಯಮುಂದೆ ಮಾತ್ರ !ಕೇವಲ ಪಬ್ಲಿಕ್‌ಕನ್ಸಮ್ಷನ್‌ಗೋಸ್ಕರ!
ಆದರೆ ತೆರೆಮರೆಯಲ್ಲಿಡೀಲ್‌ಗಳುಜೊತೆಜೊತೆಯಲ್ಲಿನಡೆಯುತ್ತವೆ.
ಈ ಕೇಸಿನಲ್ಲಿ ಡೀಲುಏನಾಯ್ತು,ಹೇಗಾಯ್ತು ಅನ್ನೋ ವಿವರಗಳು ನಮಗೆಗೊತ್ತಿಲ್ಲ.
ಆದರೆಏನೋಒಂದು ಸ್ಪಷ್ಟ ವ್ಯವಹಾರ ಅಂತೂ ಇದ್ದಿರಲೇಬೇಕು.ಯಾಕೆಂದರೆ ಯಡಿಯೂರಪ್ಪನವರುಸಿಎಂಆದ ಸುಮಾರುಒಂದೂವರೆ ವರ್ಷದ ನಂತರಮತ್ತೆಈಫೈಲ್‌ ನಂ. 424 ಗೆ ಮತ್ತೆಜೀವಬರುತ್ತೆ. ಆಗಿನ ಮುಖ್ಯಮಂತ್ರಿಗಳಜಂಟಿಕಾರ್ಯದರ್ಶಿಯಾಗಿದ್ದ ಬಿ.ಜಿ.ನಂದಕುಮಾರ್‌ಅವರು ದಿನಾಂಕ 27-03-2010ರಂದು ನಗರಾಭಿವೃದ್ಧಿ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳ ಪರವಾಗಿ ಹೀಗೆಂದು ನಿರ್ದೇಶನ ಕಳಿಸುತ್ತಾರೆ.
“ಕಡತ ಸಂಖ್ಯೆ. ಯುಡಿಡಿ 424 ಬೆಂಭೂಸ್ವಾ 2007 ನ್ನು ಸಂಪೂರ್ಣ ಮಾಹಿತಿ ಹಾಗೂ ಸ್ಪಷ್ಟ ಅಭಿಪ್ರಾಯದೊಂದಿಗೆ ಮಾನ್ಯ ಮುಖ್ಯಮಂತ್ರಿಯವರ ಅವಗಾಹನೆಗೆ ಕಳುಹಿಸಿಕೊಡುವಂತೆ ಕೋರಲು ಆದೇಶಿತನಾಗಿದ್ದೇನೆ.”

ಹೀಗೆ ಯಡಿಯೂರಪ್ಪನವರ ಆದೇಶದ ಮೇರೆಗೆ ಮತ್ತೆ ಈ ಕಡತದ ಓಡಾಟ ಶುರುವಾಗುತ್ತೆ. ಆದರೆಯಾವೊಬ್ಬ ಅಧಿಕಾರಿಯೂ ಕೂಡ ಡಿನೋಟಿಫೈ ಮಾಡುವುದಕ್ಕೆ ಪೂರಕವಾದ ಅಭಿಪ್ರಾಯ ಕೊಟ್ಟಿಲ್ಲ. ಕೋರ್ಟ್‌ನಲ್ಲಿಕೇಸು ದಾಖಲಾಗಿದ್ದರ ಬಗ್ಗೆ,ಅಂತಿಮವಾಗಿಈ ಭೂಮಿ ಸರ್ಕಾರದ ಸ್ವತ್ತಾಗಿದ್ದರ ಬಗ್ಗೆ,ಇಂತಹ ಪ್ರಕರಣಗಳನ್ನು ಡಿನೋಟಿಫಿಕೇಷನ್‌ಗೆ ಪರಿಗಣಿಸಲು ಇರುವ ತೊಡಕುಗಳ ಬಗ್ಗೆ ಟಿಪ್ಪಣಿ ಬರೆದಿದ್ದಾರೆ. ಅಂತಿಮವಾಗಿ ಕಾನೂನಿನ ಪ್ರಕಾರ ಡಿನೋಟಿಫಿಕೇಷನ್‌ಗೆ ಅವಕಾಶ ಇಲ್ಲ ಎಂಬುದಂತೂ ಯಾವುದೇ ಅನುಮಾನಗಳಿಗೆ ಎಡೆಯಿಲ್ಲದಂತೆ ಖಚಿತಪಟ್ಟಿದೆ.

ಆದರೆ ಯಡ್ಯೂರಪ್ಪನವರುಇದ್ಯಾವುದನ್ನೂ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.
ʼನಾನು ಮುಖ್ಯಮಂತ್ರಿ, ನನಗೆಬೇಕಾದಹಾಗೆ ಆದೇಶ ಮಾಡ್ತೀನಿ, ನನ್ನ ಮುಂದೆ ಕಾನೂನು ಗೀನೂನು ಯಾವುದೂ ಲೆಕ್ಕಕ್ಕಿಲ್ಲʼ ಅನ್ನೋದು ಅವರ ಧೋರಣೆ ಇದ್ದಿರಬಹುದು.

ಮಾನ್ಯಯಡಿಯೂರಪ್ಪನವರುಒಂದು ಸಾಲಿನಆದೇಶಹೊರಡಿಸ್ತಾರೆ.
“ಭೂಸ್ವಾಧೀನದಿಂದಕೈಬಿಡಲುಆದೇಶಿಸಿದೆ.”
ಇದನ್ನು ಹುಂಬತನ ಅನ್ನಬೇಕೋ ? ದಾರ್ಷ್ಟ್ಯಅನ್ನಬೇಕೋ? ಅಧಿಕಾರದಅಹಂಕಾರ/ ಮದ ಅನ್ನಬೇಕೋ ?ಅಥವಾ ಈ ಎಲ್ಲದರ ಮಿಶ್ರಣ ಅನ್ನಬೇಕೋ ಓದುಗರೇ ನಿರ್ಣಯಿಸಲಿ.

ಯಡಿಯೂರಪ್ಪನವರುಸಹಿ ಮಾಡಿದನಂತರಜೂನ್‌7 ನೇತಾರೀಖಿನಗೆಜೆಟ್‌ ನಲ್ಲಿಈ ಡಿನೋಟಿಫಿಕೇಷನ್‌ ಆದೇಶ ಪ್ರಕಟಣೆಯಾಗಿದೆ.ಆಗೆಜೆಟ್‌ ದಾಖಲೆ ನೋಡೋಣ.

ಇದುತಿಮ್ಮಾರೆಡ್ಡಿ17ಕುಂಟೆ, ಟಿನಾಗಪ್ಪ17ಕುಂಟೆ, ಮುನಿಸ್ವಾಮಪ್ಪ17ಕುಂಟೆ,
ಒಟ್ಟುಒಂದುಎಕರೆಹನ್ನೊಂದು ಗುಂಟೆಯನ್ನುಈಭೂಸ್ವಾಧೀನದಿಂದಕೈಬಿಡಲಾಗಿದೆಎಂಬುದು ಆದೇಶದಲ್ಲಿದೆ. ಅಷ್ಟುಮಾತ್ರವಲ್ಲ. ಈ ಭೂಮಿಯನ್ನುಯಾವಕಾರಣಕ್ಕಾಗಿನಿಗದಿಗೊಳಿಸಲಾಗಿತ್ತು ಎಂಬ ಅಂಶಕೂಡಇದರಲ್ಲಿದೆ. ಗೆಜೆಟ್‌ ಪ್ರಕಟಣೆಯ ಪ್ರಕಾರ ಸದರಿಜಮೀನನ್ನುಸಮೂಹವಸತಿಸಮುಚ್ಛಯನಿರ್ಮಾಣಮಾಡುವ ಯೋಜನೆಗಾಗಿ ನಿಗದಿ  ಮಾಡಲಾಗಿತ್ತು. ಈ ಡಿನೋಟಿಫಿಕೇಷನ್‌ ಆದೇಶದ ಜೊತೆಗೆ ಸಮೂಹ ವಸತಿ ಯೋಜನೆಯನ್ನೇ ರದ್ದುಪಡಿಸಲಾಗಿದೆ. ಅಂದರೆ ಮಧ್ಯಮ, ಕೆಳಮಧ್ಯಮ ವರ್ಗದ ಜನರಿಗೆ ಲಭ್ಯವಾಗಬೇಕಿದ್ದ ವಸತಿಗೆ ಎಳ್ಳುನೀರು ಬಿಡಲಾಗಿದೆ.

ಇಲ್ಲಿ ಮತ್ತೊಂದು ಮಹತ್ವದ ಅಂಶವನ್ನು ಗಮನಿಸಬೇಕು. ಮಾನ್ಯ ಕುಮಾರಸ್ವಾಮಿಯವರು ಮಾಧ್ಯಮಗಳ ಮುಂದೆ ನಿಂತು ʼಸತ್ತೋರ್‌ಹೆಸ್ರಲ್ಲಿಡೀನೋಟಿಫಿಕೇಷನ್‌ಮಾಡ್ತೀರಲ್ರಿ?ನಾಚಿಕೆ ಆಗೋಲ್ವಾ ?ʼ  ಅಂತತಮ್ಮ ರಾಜಕೀಯ ವಿರೋಧಿಗಳನ್ನು ಪ್ರಶ್ನೆ ಕೇಳಿದ್ದು ವರದಿಯಾಗಿತ್ತು. ಇದು ಒಳ್ಳೆಯ ಸಾತ್ವಿಕ ಪ್ರಶ್ನೆಯೇ ಸರಿ.

ಆದರೆ ಊರಿಗೆಲ್ಲ ನೀತಿಪಾಠ ಹೇಳೋ ಕುಮಾರಸ್ವಾಮಿಯವರುಮಾಡಿರೋದೇನು?  ಈ ಡಿನೋಟಿಫಿಕೇಷನ್‌ಆಗಿರೋದುಯಾರಹೆಸರಲ್ಲಿ? ಜಿ.ತಿಮ್ಮಾರೆಡ್ಡಿ, ಟಿನಾಗಪ್ಪ, ಮುನಿಸ್ವಾಮಪ್ಪಅವರುಗಳಹೆಸರಲ್ಲಿ. ದಯವಿಟ್ಟುಗಮನಿಸಿ. 2007 ರಲ್ಲಿವಿಮಲಾಅತ್ತೆಯವರುಜಿಪಿಎರಿಜಿಸ್ಟರ್‌ಮಾಡಿಕೊಂಡ ಸಂದರ್ಭದಲ್ಲೇ ಈಜಮೀನಿನಮೂಲಮಾಲೀಕರುಯಾರೂ ಜೀವಂತವಾಗಿರಲಿಲ್ಲ. ಆಜಿಪಿಎ ಕೊಟ್ಟವರುಅವರ 21 ಮಂದಿವಾರಸುದಾರರು. ಅವರು ತಮ್ಮ ವಿಳಾಸವನ್ನು ಸನ್‌ ಆಫ್‌ ಲೇಟ್‌ ನಾಗಪ್ಪ, ಸನ್‌ ಆಫ್‌ ಲೇಟ್‌ ಮುನಿಸ್ವಾಮಪ್ಪ ಎಂಬುದಾಗಿ ನಮೂದಿಸಿದ್ದಾರೆ. ಅಂದರೆ  ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಮಾಡಿಕೊಂಡಿರುವುದು ಸ್ಪಷ್ಟ.

ಊರಿನೋರಿಗೆಲ್ಲಾ ನೀತಿಪಾಠಹೇಳೋದು, ಸಾರ್ವಜನಿಕವಾಗಿ ದೊಡ್ಡದೊಡ್ಡ ಪೋಸ್‌ ಕೊಡೋದು, ಆದರೆ ತೆರೆಮರೆಯಲ್ಲಿ “ಆಚಾರ ಹೇಳೋಕೆ – ಬದನೆಕಾಯಿ ತಿನ್ನೋಕೆ.” ಎಂಬಂತೆ ವ್ಯವಹರಿಸುವುದು. ಇದೇ ಇವತ್ತಿನ ರಾಜಕಾರಣದ ಸಾರ.

ಇಷ್ಟಕ್ಕೇ ಮುಗಿಯೋಲ್ಲ.ಇನ್ನೂ ಒಂದು ಬಹಳ ಮುಖ್ಯವಾದ ಹಂತ ಇದೆ.

ಡಿನೋಟಿಫಿಕೇಷನ್‌ ಆದಒಂದುತಿಂಗಳಿನಲ್ಲಿ ಅಂದರೆ 5-7-2010ರಂದುಒಂದುಕ್ರಯಪತ್ರ ರಿಜಿಸ್ಟರ್‌ಆಗಿದೆ.ಯಾರಿಂದಯಾರಿಗೆ? ವಿಮಲಾಅತ್ತೆಅವರಿಂದ ಡಾ. ಟಿಎಸ್‌ಚನ್ನಪ್ಪಅವರಿಗೆ.
ಡಾ.ಟಿ.ಎಸ್.‌ ಚನ್ನಪ್ಪಅಂದರೆ ಬೇರೆ ಯಾರೋ ಅಲ್ಲ.ವಿಮಲಾ ಅತ್ತೆಯ ಸ್ವಂತ ಮಗ.
ಅನಿತಾಕುಮಾರಸ್ವಾಮಿಯವರಸ್ವಂತಸೋದರ.

ಸತ್ತವರಹೆಸರಿನಲ್ಲಿಡೀನೋಟಿಫಿಕೇಷನ್‌ಆಯ್ತು.ಬದುಕಿರುವವರಹೆಸರಿನಲ್ಲಿ ಕ್ರಯಪತ್ರ ರಿಜಿಸ್ಟರ್‌ ಆಯ್ತು. ಅಂದರೆ ಜಿಪಿಎ ಹೋಲ್ಡರ್‌ ವಿಮಲ ಅವರು ಬದುಕಿರುವ ವಾರಸುದಾರರ ಪರವಾಗಿ ಕ್ರಯಪತ್ರ ರಿಜಿಸ್ಟರ್‌ ಮಾಡಿಸಿಕೊಟ್ಟಿದ್ದಾರೆ. ಡಿನೋಟಿಫಿಕೇಷನ್‌ ಆದ ಭೂಮಿ ಅಂತಿಮವಾಗಿಯಾರಕೈ ಸೇರಿತು? ಕುಮಾರಸ್ವಾಮಿಯವರ ಬಾಮೈದ ಡಾ.ಚನ್ನಪ್ಪ ಅವರ ಹೆಸರಿಗೆ ಬಂತು.
ಕುಮಾರಸ್ವಾಮಿಯವರುತ್ವರಿತಗತಿಯಲ್ಲಿ ಫೈಲ್‌ ನಂಬರ್‌ 424  ಓಪನ್‌ ಮಾಡಿದ್ದರ ಹಿಂದಿನ ಅಸಲಿ ಆಟ ಏನು ಅನ್ನೋದು ಈಗ ಸ್ಪಷ್ಟ ಆಯ್ತು.

ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುತ್ತೆ ಅಂತ ಗಾದೆ ಮಾತಿದೆ. ಆದರೆ ಪ್ರಪಂಚ ಗಮನಿಸುತ್ತೆ. ಈ ಸರ್ಕಾರಿ ಸ್ವತ್ತಿನ ಕಬಳಿಕೆಯ ಅಕ್ರಮವನ್ನು ಗಮನಿಸಿದ ಜಯಕುಮಾರ್‌ಹಿರೇಮಠ್‌ಎಂಬ ಸಾಮಾಜಿಕಕಾರ್ಯಕರ್ತ 2015 ರ ಏಪ್ರಿಲ್‌ 30 ನೇ ತಾರೀಕುಲೋಕಾಯುಕ್ತಕ್ಕೆಒಂದುದೂರು ಕೊಟ್ಟಿದ್ದಾರೆ.ಮಾಹಿತಿ ಹಕ್ಕು, ಮತ್ತಿತರ ಮಾರ್ಗಗಳಲ್ಲಿ ಕಲೆಹಾಕಿದ ಈ ದಾಖಲೆಗಳನ್ನಲಗತ್ತಿಸಿರುವುದಾಗಿ ಹೇಳಿಕೊಂಡಿದ್ದಾರೆ.ಒಂದು ವಾರ ಕಾಲಆ ದಾಖಲೆಗಳನ್ನುಪರಿಶೀಲನೆಮಾಡಿದ ನಂತರ ಮೇಲುನೋಟಕ್ಕೆಸತ್ಯಾಂಶಇದೆಅಂತದೃಡಪಟ್ಟ ಮೇಲೆ ಕ್ರೈಂನಂ. 27/2015 ಎಂಬುದಾಗಿ ಒಂದುಎಫ್‌ಐಆರ್‌ ರಿಜಿಸ್ಟರ್‌ ಆಗಿದೆ.ಈ ಎಫ್‌ಐಆರ್‌ನ ಪ್ರಕಾರ ಆರೋಪಿನಂ 1 – ಬಿಎಸ್‌ಯಡಿಯೂರಪ್ಪ, ಆರೋಪಿನಂ.2 -ಎಚ್‌ಡಿಕುಮಾರಸ್ವಾಮಿ, ಆರೋಪಿ ನಂ. 3 –ಶ್ರೀಮತಿ ವಿಮಲಾ, ಆರೋಪಿ ನಂ. 4 -ಟಿಎಸ್‌ಚನ್ನಪ್ಪ,ಆರೋಪಿನಂ. 5 – ರಾಜಶೇಖರಯ್ಯ.

ಭ್ರಷ್ಟಾಚಾರ ತಡೆ ಕಾಯಿದೆಯ13 (1) (C) & (D) , 13 (2)ಸೆಕ್ಷನ್‌ಗಳನ್ನು ಹಾಕಲಾಗಿದೆ.
ಸಾರ್ವಜನಿಕಹುದ್ದೆಯಲ್ಲಿದ್ದುಕೊಂಡು, ಸಾರ್ವಜನಿಕಸ್ವತ್ತುಗಳನ್ನಕಬಳಿಸುವುದು
ಅಥವಾಪರಭಾರೆಮಾಡುವುದಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಿವು.  ಇದಲ್ಲದೇಐಪಿಸಿಸೆಕ್ಷನ್‌ಗಳಲ್ಲಿವೆ. ಐಪಿಸಿಸೆಕ್ಷನ್‌120(B)ಕ್ರಿಮಿನಲ್‌ ಕಾನ್ಸಪಿರೆಸಿ ಅಥವಾಅಪರಾಧಿಕಒಳಸಂಚು. ಅಂದರೆ ಒಂದುಸಾರ್ವಜನಿಕಆಸ್ತಿಯನ್ನುಗುಳುಂಮಾಡಲಿಕ್ಕೆಇಷ್ಟೆಲ್ಲ ಮಂದಿ ಒಟ್ಟುಗೂಡಿ ನಡೆಸಿದ ಸಂಚು. ಐಪಿಸಿ ಸೆಕ್ಷನ್‌ 420 – ಚೀಟಿಂಗ್‌. ಸಾರ್ವಜನಿಕರನ್ನುನಂಬಿಸಿ, ಯಾಮಾರಿಸಿದ್ದಕ್ಕಾಗಿ ಈಸೆಕ್ಷನ್‌.
ಐಪಿಸಿ 409 – ಕ್ರಿಮಿನಲ್‌ ಬ್ರೀಚ್‌ ಆಫ್‌ ಟ್ರಸ್ಟ್‌, ವಿಶ್ವಾಸ ದ್ರೋಹದ ಅಪರಾಧ. ಜನ ನಿಮ್ಮ ಮೇಲೆವಿಶ್ವಾಸವಿಟ್ಟುನಿಮ್ಮನ್ನಅಧಿಕಾರದಲ್ಲಿಕೂರಿಸಿರುತ್ತಾರೆ. ನೀವುಅಧಿಕಾರದದುರ್ಬಳಕೆಮಾಡಿಕೊಂಡು, ಕಾನೂನುಉಲ್ಲಂಘಿಸಿಸಾರ್ವಜನಿಕ ಆಸ್ತಿ ಕಬಳಿಸಿ, ವಿಶ್ವಾಸ ದ್ರೋಹ ಎಸಗಿದ್ದೀರಿ ಅನ್ನೋದು ಆ ಸೆಕ್ಷನ್‌ ಸಾರಾಂಶ.  ಐಪಿಸಿ 418 – ರಕ್ಷಣೆ ಮಾಡಬೇಕಾದವರೇ ಭಕ್ಷಣೆ ಮಾಡಿದ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್‌. ಬೇಲಿಯೇ ಎದ್ದು ಹೊಲ ಮೇಯ್ತು ಅಂತಾರಲ್ಲಾ ಅಂಥಾ ಅಕ್ರಮಕ್ಕೆ ಸಂಬಂಧಿಸಿದ್ದು.

ಇಲ್ಲಿಯವರೆಗೆ ಒಂದು ರೀತಿಯಾದರೆ ಲೋಕಾಯುಕ್ತ ಎಫ್‌ಐಆರ್‌ ಆದಮೇಲೆ ಮತ್ತೊಂದು ರೀತಿಯ ದುರಂತ. ಇಂಥಾ ರೆಡ್‌ ಹ್ಯಾಂಡೆಡ್‌ ಕೇಸು ರಿಜಿಸ್ಟರ್‌ ಆಗಿ 9 ವರ್ಷ 4 ತಿಂಗಳು ಕಳೆದಿದೆ. ಈ ಕೇಸು ಮತ್ತು ಅದರ ಫೈಲುಗಳು ಧೂಳು ತಿನ್ನುತ್ತಾ ಕೂತಿವೆ. ನೆನಪಿಡಿ, ಕೇಸು ದಾಖಲಾಗಿ ಇದು ಹತ್ತನೇ ವರ್ಷ.

ಮಾನ್ಯ ಲೋಕಾಯುಕ್ತ ಸಾಹೇಬರಿಗೆ ರಾಜ್ಯದ ಜನತೆಯ ಪರವಾಗಿ ಒಂದೆರಡು ಪ್ರಶ್ನೆಗಳು. ಮಹಾಶಯರೆ, ಒಂಬತ್ತು ವರ್ಷ ನಾಲ್ಕು ತಿಂಗಳು ಈ ಕೇಸನ್ನು ಯಾಕೆ ಮೂಲೆಗೆ ಸರಿಸಿದ್ದೀರಿ ? ಈ ಕೇಸಿನ ಬಗ್ಗೆ ಏನು ತನಿಖೆ ಮಾಡಿದ್ದೀರಿ ? ಈ ಇಬ್ಬರು ಸಿಎಂ ಗಳಿಗಾಗಲಿ, ಅವರ ಹೈಪ್ರೊಫೈಲ್‌ ಬಂಧುಗಳಿಗಾಗಲಿ ಕನಿಷ್ಟಪಕ್ಷ ಒಂದು ನೋಟೀಸನ್ನಾದರೂ ಕೊಟ್ಟಿದ್ದೀರಾ ? ಏನಾದರೂ ವಿಚಾರಣೆ ನಡೆಸಿದ್ದೀರಾ ? ಡಿನೋಟಿಫಿಕೇಷನ್‌ ಕಡತದಲ್ಲಿ ನೋಟ್‌ ಬರೆದಿರೋ ಅಷ್ಟೆಲ್ಲಾ ಅಧಿಕಾರಿಗಳಿದ್ದಾರಲ್ಲಾ… ಅವರ ಹೇಳಿಕೆ  ದಾಖಲಿಸಿದ್ದೀರಾ ? ಅವೆಲ್ಲವೂ ಪ್ರಮುಖ ಸಾಕ್ಷಿಅಲ್ಲವಾ ?
ಲೋಕಾಯುಕ್ತ ಸಂಸ್ಥೆ ಇರೋದು ಭ್ರಷ್ಟರನ್ನು ವಿಚಾರಣೆ ಮಾಡಲಿಕ್ಕೋ ರಕ್ಷಣೆ ಮಾಡಲಿಕ್ಕೋ ಅನ್ನೋ ಅನುಮಾನ ಸಾರ್ವಜನಿಕರಿಗೆ ಮೂಡಿದರೆ ಅದಕ್ಕೆ ನೀವೇ ಹೊಣೆ ಅಲ್ಲವೆ ?
ನಿಮ್ಮ ಸಂಸ್ಥೆ ಹೈಪ್ರೊಫೈಲ್‌ ಅಪರಾಧಿಗಳನ್ನು ಬಚಾವ್‌ ಮಾಡಿ, ಕೆಳ ಹಂತದ ನೌಕರರ ಮೇಲೆ ಮಾತ್ರ ತಮ್ಮ ಪ್ರತಾಪ ತೋರಿಸೋದಾ ?
ಲೋಕಾಯುಕ್ತದ ಇಂಥಾ ಅದಕ್ಷತೆ, ನಿರ್ಲಕ್ಷ್ಯ ಕಂಡು ವ್ಯವಸ್ಥೆಯ ಮೇಲೆ ಜನ ವಿಶ್ವಾಸಕಳೆದುಕೊಳ್ಳುತ್ತಾರೆಎನ್ನುವ ಪರಿಜ್ಙಾನ ಇದ್ದಲ್ಲಿ ಇಷ್ಟು ವರ್ಷ ಕೈಕಟ್ಟಿ ಕೂರುತ್ತಿರಲಿಲ್ಲ ಅಲ್ಲವೆ ?
ದಯಮಾಡಿ ರಾಜ್ಯದ ಜನತೆಗೆ ಉತ್ತರ ಕೊಡಿ.

ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷಕ್ಕೆ ನೇರಾನೇರ ಪ್ರಶ್ನೆ
ಸ್ವಾಮಿ, ಚುನಾವಣೆಯ ಸಂದರ್ಭದಲ್ಲಿ ನೀವು ಜನರಿಗೆ ಕೊಟ್ಟಿದ್ದ ಭರವಸೆ ಏನು ?
ಭ್ರಷ್ಟಾಚಾರಗಳನ್ನು ಬಯಲಿಗೆಳೆದು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಆಶ್ವಾಸನೆ ಕೊಟ್ಟಿದ್ದನ್ನು ಮರೆತೇಬಿಟ್ಟರಾ?  ಮರೆತಿಲ್ಲವಾದರೆ ಯಾಕೆ ಕೈಕಟ್ಟಿಕೊಂಡು ಕೂತಿದ್ದೀರಿ ?
ನೀವೂ ಕೂಡ ಇದರಲ್ಲಿ ಶಾಮೀಲಾಗಿದ್ದೀರಾ ? ಅಥವಾ ನಿಮ್ಮ ಯಾವುದಾದರೂಅಕ್ರಮಗಳನ್ನು ಅವರು ಹೊರತೆಗೆಯುತ್ತಾರೆ ಅಂತ ಭಯವೋ ?? ಬಿಜೆಪಿ-ಜೆಡಿಎಸ್‌ಪಕ್ಷಗಳನ್ನು ಬಿಟ್ಟು ಜನ ನಿಮಗ್ಯಾಕೆ ಓಟು ಹಾಕಬೇಕಿತ್ತು? 135 ಸೀಟು ಯಾಕೆ ಕೊಡಬೇಕಿತ್ತು? ದಯಮಾಡಿ ಉತ್ತರಿಸಿ.
ನಿಮ್ಮ ಮಾತಿನ ಮೇಲೆ ಭರವಸೆ ಉಳಿಸಿಕೊಳ್ಳಲಿಕ್ಕಾದರೂ ಸ್ವಲ್ಪ ಕೆಲಸ ಮಾಡಿ.

ಮಾನ್ಯ ಕುಮಾರಸ್ವಾಮಿಯವರೆ,
ನೀವು ಸಾರ್ವಜನಿಕವಾಗಿ ಪರಿಶುದ್ಧ ಎಂಬಂತೆ ಸ್ವಯಂ ಸರ್ಟಿಫಿಕೇಟ್‌ ಕೊಟ್ಟುಕೊಂಡು ಮಾತಾಡ್ತೀರಿ. ಬೇರೆಯವರಿಗೆ ನೈತಿಕತೆಯ ಪಾಠ ಮಾಡುತ್ತೀರಿ. ದಯಮಾಡಿ ರಾಜ್ಯದ ಜನತೆಗೆ ಈ ಕೆಲವು ಪ್ರಶ್ನೆಗಳಿಗೆ  ಉತ್ತರ ಕೊಡಿ.

ಪ್ರಶ್ನೆ – 1)  ರಾಜಶೇಖರಯ್ಯ ಅನ್ನೋ ಹೆಸರಿನಲ್ಲಿ ಒಂದು ಬೇನಾಮಿ ಅರ್ಜಿ ತೆಗೆದುಕೊಂಡು ಡಿನೋಟಿಫಿಕೇಷನ್‌ ಕಡತಸೃಷ್ಟಿ ಮಾಡಿದ್ದು ನಿಜವೋ ಸುಳ್ಳೋ ?

ಪ್ರಶ್ನೆ – 2) ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಅಂತ ಹಲವು ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರವೂ ಡಿನೋಟಿಫಿಕೇಷನ್‌ ಕಡತವನ್ನು ಪುಷ್‌ ಮಾಡಿದ್ರಲ್ಲಾ, ಯಾಕೆ ?

ಪ್ರಶ್ನೆ – 3) ನಿಮ್ಮ ಅತ್ತೆ ಶ್ರೀಮತಿ ವಿಮಲಾ ಹೆಸರಿನಲ್ಲಿ ಜಿಪಿಎ ಪಡೆದುಕೊಂಡಿದ್ದುಸುಳ್ಳೇ ?

ಪ್ರಶ್ನೆ- 4) ಯಡಿಯೂರಪ್ಪ ಸರ್ಕಾರ ಬಂದಮೇಲೆ ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಮಾಡಿಸಿಕೊಂಡಿದ್ದು ಸುಳ್ಳೇ ?
ಪ್ರಶ್ನೆ – 5) ಅಂತಿಮವಾಗಿ ಸರ್ಕಾರಕ್ಕೆ ಸೇರಿದ್ದ ಆ ಆಸ್ತಿಯನ್ನು ನಿಮ್ಮ ಬಾಮೈದ ಚನ್ನಪ್ಪ ಅವರ ಹೆಸರಿಗೆ ಕ್ರಯಪತ್ರನೋಂದಣಿ ಮಾಡಿಸಿರೋದು ಸುಳ್ಳೆ ?

ನೀವು ಸಾರ್ವಜನಿಕ ಸ್ಪಷ್ಟೀಕರಣ ಕೊಟ್ಟರೆ ಉತ್ತಮ. ಅಥವಾ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿದ್ದರೆ ನಿಮ್ಮ ಅನುಕೂಲದ ಸ್ಥಳಕ್ಕೇ ನಾವು ಕ್ಯಾಮರಾದೊಂದಿಗೆ ಬರುತ್ತೇವೆ. ಜನರಿಗೆ ಸತ್ಯಾಸತ್ಯತೆ ತಿಳಿಯಲಿ. ದಯಮಾಡಿ ಪ್ರತಿಕ್ರಿಯಿಸಿ.

ಮಾನ್ಯ ಯಡಿಯೂರಪ್ಪನವರೆ,
ಮುಖ್ಯಮಂತ್ರಿ ಸ್ಥಾನದ ಅಧಿಕಾರ ಎಂದರೆ ಸಾರ್ವಜನಿಕ ಸ್ವತ್ತುಗಳನ್ನು ಮನಸೋ ಇಚ್ಚೆ ಪರಭಾರೆ ಮಾಡುವ ಅಧಿಕಾರ ಎಂದುಕೊಂಡಿದ್ದೀರಾ ? ಈ ಡಿನೋಟಿಫಿಕೇಷನ್‌ ಅಕ್ರಮದಲ್ಲಿ ನೀವು ಕುಮಾರಸ್ವಾಮಿಯವರ ಜೊತೆ ಶಾಮೀಲಾಗಿರುವುದು ಸುಳ್ಳೇ ? ಈ ಅಕ್ರಮ ಡಿನೋಟಿಫಿಕೇಷನ್‌ಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸಾಲುಸಾಲಾಗಿ ಅಧಿಕಾರಿಗಳು ಪದೇಪದೇ ಸ್ಪಷ್ಟವಾಗಿ ಬರೆದ ನಂತರವೂ ಕೂಡ ನೀವು ಅಧಿಕಾರವನ್ನು ದುರ್ಬಳಕೆ ಮಾಡಿ ಡಿನೋಟಿಫಿಕೇಷನ್‌ ಆದೇಶ ಹೊರಡಿಸಿದ್ದು ಯಾಕೆ ? ಯಾವ ಲಾಭ ಪಡೆದುಕೊಳ್ಳಲಿಕ್ಕಾಗಿ ಈ ಅಕ್ರಮಕ್ಕೆ ನೀವು ಕೈ ಹಾಕಿದಿರಿ ?
ಅಧಿಕಾರ ಕೈಗೆ ಸಿಕ್ಕ ಕೂಡಲೆ ಕಾನೂನನ್ನು ಕಾಲಕಸ ಮಾಡುವ ನಿಮ್ಮಂಥ ರಾಜಕಾರಣಿಗಳು ಸಾರ್ವಜನಿಕ ಜೀವನದಿಂದಲೇ ದೂರ ಉಳಿಯುವುದು ನಾಡಿನ ಹಿತದೃಷ್ಟಿಯಿಂದ ಒಳ್ಳೆಯದಲ್ಲವೆ ?

ಕೊನೆಯದಾಗಿ,
ಆತ್ಮೀಯ ಓದುಗರೇ…
ನಮ್ಮ ಈದಿನ.ಕಾಂ ಸಂಸ್ಥೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ತನಿಖಾ ವರದಿಗಳನ್ನು ನಿಮ್ಮ ಮುಂದಿಟ್ಟಿದೆ. ಇಲ್ಲಿ ನಾವು ಪ್ರತಿಪಾದಿಸಿರುವ ಎಲ್ಲಾ ವಿಚಾರಗಳು ಅಧಿಕೃತ ದಾಖಲೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಕಟು ವಾಸ್ತವಗಳನ್ನು ಆಧರಿಸಿದ್ದು. ಊಹಾಪೋಹಗಳನ್ನಾಧರಿಸಿ  ಕಟ್ಟುಕತೆಗಳನ್ನು ಕಟ್ಟುವ ವಿಧಾನವನ್ನು ನಾವು ಅನುಸರಿಸುವುದಿಲ್ಲ. ಯಾರಿಗಾದರೂ ಈ ವರದಿ ರೋಚಕತೆಯೆನಿಸಿದರೆ ಅದು ನಮ್ಮ ತಪ್ಪಲ್ಲ; ಈ ಅಕ್ರಮದ ಒಳಸುಳಿಗಳು ಇರುವುದೇ ಹಾಗೆ ಎಂಬುದನ್ನು ತಾವು ಮನಗಾಣಬೇಕೆಂದು ವಿನಮ್ರವಾಗಿ ಅರಿಕೆ ಮಾಡುತ್ತೇವೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!