ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮಕ್ಕೆ ರಾತ್ರಿ ವೇಳೆ ಬರುತ್ತಿದ್ದ ಬಸ್ ಅನ್ನು ತಡೆ ಹಿಡಿದಿರುವುದನ್ನು ಖಂಡಿಸಿ ಸಾರಿಗೆ ನಿಯಂತ್ರಣಾಧಿಕಾರಿಯನ್ನು ಗ್ರಾಮಸ್ಥರು ಹಾಗೂ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.
ಸುಮಾರು ವರ್ಷಗಳಿಂದ ರಾತ್ರಿ ವೇಳೆಯಲ್ಲಿ ಗ್ರಾಮಕ್ಕೆ ಹೋಗಲು ತೊಂದರೆಯಾಗುತ್ತಿದೆ. ಅಲ್ಲದೆ ಬೆಳಗಿನ ಜಾವ 7 ಗಂಟೆಯಲ್ಲಿ ಗ್ರಾಮದಿಂದ ಶಾಲಾ,ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಈ ಹಿಂದೆ ನಮಗೆ ಬಸ್ ವ್ಯವಸ್ಥೆ ಸರಿಯಾಗಿತ್ತು. ಇದೀಗ ನಿಲ್ದಾಣದಿಂದ ಗ್ರಾಮಕ್ಕೆ ರಾತ್ರಿ 9 ಗಂಟೆ ಹೊತ್ತಿನಲ್ಲಿ ಹೋಗಲು ತೊಂದರೆಯಾಗಿದ್ದು, ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಿ ಸಮಸ್ಯೆ ದೂರಮಾಡಬೇಕು ಎಂದು ಒತ್ತಾಯ ಮಾಡಿ ಸಾರಿಗೆ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ಬಾಬು, ಚಂದಗಿರಿಕೊಪ್ಪಲು ಗ್ರಾಮದ ವಿಕಾಶ್, ಜ್ಞಾನೇಶ್, ಜಗದೀಶ್, ಫಿಲಿಪ್ ಸೇರಿದಂತೆ ಇತರರಿದ್ದರು.