ಶ್ರೀರಂಗಪಟ್ಟಣ ಪುರಸಭೆ ವತಿಯಿಂದ ಇಂದು ಪಟ್ಟಣದ ಜನರಿಗೆ ಪ್ಲಾಸ್ಟಿಕ್ ವಿರುದ್ಧ ಜನಜಾಗೃತಿ ಮೂಡಿಸಲಾಯಿತು.
ಸ್ವಚ್ಛ ಭಾರತ ಸ್ವಚ್ಛ ಶ್ರೀರಂಗಪಟ್ಟಣ ಕಾರ್ಯಕ್ರಮದಡಿ ಇಂದು ಪುರಸಭಾ ಸದಸ್ಯರು ಜಾಗೂ ಅಧಿಕಾರಿಗಳು ಮನೆ ಮನೆಗೆ ತೆರಳಿ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಿದರು.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಹಾನಿಯಾಗಿತ್ತದೆ. ಆದ್ದರಿಂದ ನಾವು ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ವಸಂತಕುಮಾರಿ ಲೋಕೇಶ್, ಪುರಸಭೆ ಆರೋಗ್ಯಾಧಿಕಾರಿ ಚಂಪಾಶ್ರೀ, ಪರಿಸರ ಅಭಿಯಂತರ ಸಹನಾ, ಮಂಜೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.