ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಪೋನ್ ಕೊಡುವುದಾಗಿ ಬಿಜೆಪಿ ಭರವಸೆ ನೀಡಿತ್ತು, ಆದರೆ ಈ ಕಾರ್ಯಕ್ರಮ ಎಲ್ಲಿ ಜಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
ಟ್ವಿಟ್ ಮಾಡಿರುವ ಅವರು,ಬಸವರಾಜ ಬೊಮ್ಮಾಯಿ ಅವರೇ, ಸ್ಮಾರ್ಟ್ಫೋನ್ ವಿತರಣೆ ಹುಸಿ ಭರವಸೆಯೇ ? ಇದು ನಿಮ್ಮ ಜನಸ್ಪಂದನವೇ ? ಎಂದು ಕುಟುಕಿದ್ದಾರೆ.
Where is the promise of CM smartphone program #BombeBommai ? Is this your #JanaSpandana @BJP4Karnataka ?
You have cheated the women of Karnataka with your false promises and sick mentality towards women.@BSBommai Women of Karnataka are asking you today, #NimHatraIdyaUttara pic.twitter.com/B7V6j2xvca
— Siddaramaiah (@siddaramaiah) September 11, 2022
ನಿಮ್ಮ ಸುಳ್ಳು ಭರವಸೆಗಳು ಮತ್ತು ಮಹಿಳೆಯರ ಬಗ್ಗೆ ನಿಮಗೆ ಇರುವ ಕೆಟ್ಟ ಮನಸ್ಥಿತಿಯಿಂದ ನೀವು ಕರ್ನಾಟಕದ ಮಹಿಳೆಯರಿಗೆ ಮೋಸ ಮಾಡಿದ್ದೀರಿ. ಈ ಬಗ್ಗೆ ಕರ್ನಾಟಕದ ಮಹಿಳೆಯರು ಇಂದು ನಿಮ್ಮನ್ನು ಪ್ರಶ್ನಿಸುತ್ತಿದ್ದಾರೆ, ಇದಕ್ಕೆ ನಿಮ್ಮ ಬಳಿ ಉತ್ತರವಿದೆಯೇ ಎಂದು ಬೊಮ್ಮಯಿ ಅವರನ್ನು ವ್ಯಂಗ್ಯವಾಡಿದ್ದಾರೆ.