ದ್ವಿತೀಯ ಪಿ.ಯು.ಸಿ. 2022 ರ ಸಿ.ಇ.ಟಿ. ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ, ಪಿಯುಸಿ ಅಂಕಗಳನ್ನು ಪರಿಗಣಿಸಿ ಸಿಇಟಿ ರ್ಯಾಂಕ್ ನೀಡಿ, ತಕ್ಷಣ ಕೌನ್ಸೆಲಿಂಗ್ ನಡೆಸಬೇಕೆಂದು ಅಖಿಲ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾ ಅಧ್ಯಕ್ಷ ಜೀವನ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ತಾರತಮ್ಯ ಮಾಡುವುದನ್ನು ಬಿಟ್ಟು, ಹಿಂದಿನ ವರ್ಷದಲ್ಲಿ ಓದಿರುವ ವಿದ್ಯಾರ್ಥಿಗಳ ದ್ವಿತೀಯ ಪಿ.ಯು.ಸಿ, ಅಂಕಗಳನ್ನು ಪರಿಗಣಿಸಿ ಸಿ.ಇ.ಟಿ ನೀಡಬೇಕು, ಈಗಾಗಲೇ ಸಿ.ಇ.ಟಿ. ಫಲಿತಾಂಶ ಪ್ರಕಟವಾಗಿ ಒಂದು ತಿಂಗಳು ಕಳೆದರೂ ಕೌನ್ಸಿಲಿಂಗ್ ಮಾಡದೇ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರ, ಭವಿಷ್ಯದ ವಿದ್ಯಾರ್ಥಿಗಳಿಗೆ ತೊಂದರೆ ಮಾಡುತ್ತಿದೆ ಎಂದು ದೂರಿದ್ದಾರೆ.
ನ್ಯಾಯಾಲಯವು ಹಳೆಯ ವಿದ್ಯಾರ್ಥಿಗಳಿಗೂ ದ್ವಿತೀಯ ಪಿ.ಯು.ಸಿ, ಅಂಕಗಳನ್ನು ಪರಿಗಣಿ ರ್ಯಾಂಕ್ ಗಳನ್ನು ಪುನರ್ ಪ್ರಕಟಿಸಬೇಕೆಂದು ಆದೇಶ ನೀಡಿರುವುದರಿಂದ ಸರ್ಕಾರ ಯೋಚನ ಮಾಡುತ್ತಿದೆ, ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ಯುವ ಮೋರ್ಚ್ ಘಟಕದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.