ಮಂಡ್ಯ ಜಿಲ್ಲೆಯ ರೈತರಿಗೆ ಸರ್ಕಾರದಿಂದ ವಿತರಿಸಿರುವ ಕೃಷಿ ಇಲಾಖಾ ವ್ಯಾಪ್ತಿಯ ಪರಿಕರಗಳಲ್ಲಿ ಸಮಸ್ಯೆಯಿದ್ದರೆ ಜಿಲ್ಲಾ ಜಾರಿ ದಳಕ್ಕೆ ದೂರು ನೀಡಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಹೆಚ್.ಜಿ.ಪ್ರತಿಭಾ ತಿಳಿಸಿದರು.
ಜಿಲ್ಲಾ ಜಾರಿ ದಳದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕೃಷಿ ಪರಿಕರಗಳಾದ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ, ಯಂತ್ರೋಪಕರಣಗಳ ಸಮಸ್ಯೆಯಿದ್ದರೆ, ಗುಣಮಟ್ಟದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಜಾರಿ ದಳಕ್ಕೆ ಬಂದು ರೈತರು ದೂರು ನೀಡಿದರೆ ವಿಚಾರಣೆ ನಡೆಸಿ ನ್ಯಾಯ ಕೊಡಿಸಲಾಗುವುದು.
ಸೊಸೈಟಿಗಳಲ್ಲಿ ರಸಗೊಬ್ಬರ ದಾಸ್ತಾನು ಇಟ್ಟುಕೊಂಡು ಸಕಾಲದಲ್ಲಿ ರೈತರಿಗೆ ವಿತರಿಸದಿದ್ದರೆ,ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಸದ ಬಗ್ಗೆ ನಮಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.