Friday, September 20, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ವಸತಿ ಶಾಲೆಗೆ ಜಮೀನು ಕಾಯ್ದಿರಿಸಿ : ಸಚಿವ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆ ನಾಗಮಂಗಲ ‌ತಾಲ್ಲೂಕಿನ ದೇವಲಾಪುರ ಅಂಬೇಡ್ಕರ್ ವಸತಿ ಶಾಲೆಗೆ ಶೀಘ್ರ ಜಮೀನು ಕಾಯ್ದಿರಿಸಿ ಆದೇಶ ಹೊರಡಿಸುವಂತೆ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ .

ಕೃಷಿ ಸಚಿವರು ಇಂದು‌ ನಾಗಮಂಗಲ -ಕೆ.ಅರ್ ಪೇಟೆ ನಡುವಿನ ಮಾಗಡಿ ಜಲಸೂರು ಹೆದ್ದಾರಿ‌ ಕಾಮಗಾರಿ ಪೂರ್ವ ಸಿದ್ದತೆ ಪರಿಶೀಲನೆಗೆ ತೆರಳುವ ಮಾರ್ಗ ಮಧ್ಯೆ ದೇವಲಾಪುರ ಅಂಬೇಡ್ಕರ್ ವಸತಿ ಶಾಲೆ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಮಾತನಾಡಿ ಸಮಸ್ಯೆಗಳ ಕುರಿತು ಆಲಿಸಿದರು.

ಹೊಸ‌ ಕಟ್ಟಡ ಕಾಮಗಾರಿಗೆ ಸ್ಥಳಾವಕಾಶ ಅಗತ್ಯ ಇರುವುದರಿಂದ ಈಗಾಗಲೇ ಜಿ. ಬೊಮ್ಮನಹಳ್ಳಿ ಬಳಿ ಗುರುತಿಸಿರುವ ಜಾಗದಲ್ಲಿ ಜಮೀನು ಕಾಯ್ದಿರಿಸಿ ಹಸ್ತಾಂತರ ಮಾಡುವಂತೆ ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್ ಅವರಿಗೆ ಸಚಿವರು ಸೂಚಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!