Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ಬಾರದ ಅಧಿಕಾರಿಗಳ ನೇಮಕ : ಕಾಂಗ್ರೆಸ್ ಖಂಡನೆ

ರಾಜ್ಯ ಸರ್ಕಾರ ಪಾಂಡವಪುರ ಉಪವಿಭಾಗಾಧಿಕಾರಿಯನ್ನಾಗಿ ಕನ್ನಡ ಭಾಷೆ ಬಾರದ ಐಎಎಸ್ ಅಧಿಕಾರಿ, ಮೂಲತಃ ಮಣಿಪುರ ರಾಜ್ಯದವರಾದ ನೋಂಗ್ ಜೈ ಮೊಹಮದ್ ಅಲಿ ಅಕ್ರಮ ಶಾ ಅವರನ್ನು ನೇಮಕಗೊಳಿಸಿರುವುಕ್ಕೆ ಪಾಂಡವಪುರ ತಾಲೂಕು ಕಿಸಾನ್ ಘಟಕದ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್ ಖಂಡನೆ ವ್ಯಕ್ತಪಡಿಸಿದ್ದಾರೆ.

ಪಾಡವಪುರ ಉಪವಿಭಾಗದ ರೈತರಿಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆ ಅರ್ಥವಾಗದ ಕಾರಣ ಪಾಂಡವಪುರ ಉಪವಿಭಾಗಾಧಿಕಾರಿಗಳು ಹಿಂದಿಯಲ್ಲಿ ಮಾತನಾಡುವುದರಿಂದ ರೈತರ ಯಾವ ಸಮಸ್ಯೆಯನ್ನೂ ಬಗೆಹರಿಸಲು ಅವರಿಂದ
ಕಷ್ಟಸಾಧ್ಯವಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಬೇಕಿದ್ದರೆ, ಉಪವಿಭಾಗಾಧಿಕಾರಿಗಳಿಗೆ ಬೆಂಗಳೂರಿನಲ್ಲಿ ಕರೆದು ತರಬೇತಿ ಕೊಡಿಸುವ ಮೂಲಕ ಕನ್ನಡ ಭಾಷೆ ಕಳಿಸಲಿ. ಆದರೆ ಏಕಾಏಕಿ ಕನ್ನಡ ಬಾರದವರನ್ನು ಮಂಡ್ಯ ಜಿಲ್ಲೆಗೆ ಅಧಿಕಾರಿಗಳನ್ನಾಗಿ ನೇಮಿಸುವ ಸರ್ಕಾರದ ಕ್ರಮ ಸರಿಯಲ್ಲ. ತಕ್ಷಣವೇ ಕನ್ನಡ ಭಾಷೆ ಗೊತ್ತಿರುವ ಬೇರೆ ಅಧಿಕಾರಿಯನ್ನು ಪಾಂಡವಪುರ ಉಪವಿಭಾಗಾಧಿಕಾರಿಯನ್ನಾಗಿ ಸರ್ಕಾರ ನಿಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!