ಕರ್ನಾಟಕ ರತ್ನ,ನಟ ಸಾರ್ವಭೌಮ,ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಪುನೀತ್ ರಾಜ್ಕುಮಾರ್
ಪ್ರಥಮ ವರ್ಷದ ಪುಣ್ಯಸ್ಮರಣೆಯ ಸ್ಮರಣಾರ್ಥ ಅವರ ಅಭಿಮಾನಿಗಳು ಅನ್ನ ಸಂತರ್ಪಣೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಮೊದಲಾದ ಸೇವಾ ಕಾರ್ಯಗಳನ್ನು ಮಾಡಿದ್ದಾರೆ.
ಅದರಂತೆ ಮಳವಳ್ಳಿಯ ಅಪ್ಪು ಅಭಿಮಾನಿಗಳು ಪುನೀತ್ ರಾಜ್ಕುಮಾರ್ ನೆನಪಿನಲ್ಲಿ ಪಟ್ಟಣದಲ್ಲಿ ಬುದ್ಧಿಮಾಂದ್ಯತೆಗೆ ಒಳಗಾಗಿ ಓಡಾಡುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಕಟಿಂಗ್, ಸೇವಿಂಗ್ ಮಾಡಿಸಿ, ಸ್ನಾನ ಮಾಡಿಸಿದ್ದಾರೆ. ನಂತರ ಹೊಸ ಉಡುಪನ್ನು ಅವರಿಗೆ ತೊಡಿಸಿ ಅಭಿಮಾನ ಮೆರೆದಿದ್ದಾರೆ.
ಅಪ್ಪು ಅಭಿಮಾನಿಗಳಾದ ನಿಂಗಪಟ್ಟಣದ ಸುಂದ್ರಪ್ಪ, ಸಿದ್ದೇಶ್(ಗಾಂಧಿ), ಅಖಿಲ್, ಸಿದ್ದಪ್ಪ, ಅವಿನಾಶ್, ಹಲಗೂರು ನಾಗರಾಜು, ಪೇಟೆ ಬೀದಿ ನಾಗರಾಜು ಮತ್ತಿತರರು ಮಾಡಿದ ಈ ಸೇವಾ ಕಾರ್ಯಕ್ಕೆ ಜನರು ಶ್ಲಾಘಿಸಿದರು.