ಮೈತ್ರಿ ಸರ್ಕಾರ ನಡೆಸುವುದು ಸುಲಭದ ಮಾತಲ್ಲ, ಅದರಲ್ಲಿ ಅಪಾರವಾದ ತಾಳ್ಮೆ ಸಮಾಧಾನ ಇರುವ ವ್ಯಕ್ತಿಗಳ ಕೆಲಸ ಬಹಳ ಮುಖ್ಯವಾಗಿರುತ್ತೆ.
ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾಗಿದ್ದ ಅವರೊಂದಿಗೆ ಉಳಿದ ಮಿತ್ರ ಪಕ್ಷಗಳನ್ನು ಬೆಸೆಯಲು ಪ್ರಮೋದ್ ಮಹಾಜನ್ ಇದ್ದರು, ಯಾವುದಾದರೂ ಸಮಸ್ಯೆ ತೆಗೆದುಕೊಂಡು ಮಿತ್ರಪಕ್ಷಗಳ ನಾಯಕರು ಬಂದಾಗ ಅದಕ್ಕೆ ವಾಜಪೇಯಿ ಸ್ಪಂದಿಸದೇ ಇದ್ದಾಗ ಪ್ರಮೋದ್ ಮಹಾಜನ್ ಎಂಟ್ರಿ ಆಗಿ ” ನಿಮಗೆ ಗೊತ್ತಾಲ್ವ ಆಟಲ್ ಜೀ ಅದೇ ತರಹ, ಅವರನ್ನು ಬಿಡಿ ನೀವೂ ತಲೆ ಕೆಡಿಸಿಕೊಳ್ಳಬೇಡಿ, ನಾನು ನಿಮ್ಮ ಕೆಲಸವನ್ನು ಅವರ ಹತ್ತಿರ ಮಾಡಿಸಿಕೊಡುತ್ತಿನಿ” ಎಂದು ಹೇಳಿ ಪ್ರಮೋದ್ ಮಹಾಜನ್ ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದರು.ಆ ರೀತಿಯಲ್ಲಿ ಮೈತ್ರಿಪಕ್ಷಗಳನ್ನು ಸಮಾಧಾನ ಮಾಡುತ್ತಿದ್ದರು.
ಈಗ ಮೋದಿಜೀಗೆ ಆ ರೀತಿ ಸರ್ವರನ್ನು ನಿಭಾಯಿಸಬಲ್ಲ ಜೋಡಿ ಯಾರು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.