ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೃಷ್ಣೆಗೌಡ, ಉಪಾಧ್ಯಕ್ಷರಾಗಿ ಪವಿತ್ರ ಆಯ್ಕೆಯಾಗಿದ್ದಾರೆ.
ಒಟ್ಟು 21ಮಂದಿ ಸದಸ್ಯರಲ್ಲಿ ಪೈಕಿ 14 ಮತಗಳನ್ನು ಪಡೆದ ಕೃಷ್ಣೆಗೌಡ ಹಾಗೂ ಉಪಾಧ್ಯಕ್ಷರಾಗಿ ಪವಿತ್ರ ರವರು ಆಯ್ಕೆಯಾಗದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಮುಖಂಡ ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್ ರಾಮಚಂದ್ರ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಗಾಯತ್ರಿ, ಸುಮಾ, ಅನಿತಾ, ಪುಟ್ಟೇಗೌಡ, ಭಾಗ್ಯಮ್ಮ, ಶಂಕರಾಚಾರಿ, ಗೌರಮ್ಮ, ದಿವ್ಯ, ಶೋಭಾ, ಬೋರಯ್ಯ, ಕುಮಾರ್, ಮುಖಂಡ ಪ್ರತಾಪ್ ಸೇರಿದಂತೆ ಮತ್ತಿತರಿದ್ದರು.