ಈಗ ಬಂದು ಚುನಾವಣೆಯಲ್ಲಿ ”ನಾವು ಬಸವಣ್ಣನವರ ಅನುಯಾಯಿಗಳು. ಅವರ ಮಾರ್ಗದರ್ಶನದಲ್ಲೇ ಆಡಳಿತ ನಡೆಸುತ್ತಿದ್ದೇವೆ” ಎಂದು ಹೇಳುತ್ತಿರುವ ಬಿಜೆಪಿಗರು ಬಸವಣ್ಣನಿಗೆ ಮಾಡಿದ ಅಪಮಾನ ಮರೆಯದಿರಿ ಎಂದು ಕಾಂಗ್ರೆಸ್ ಪಕ್ಷವು ರಾಜ್ಯದ ಜನರನ್ನು ಎಚ್ಚರಿಸಿದೆ.
ಈಗ ಬಂದು ಚುನಾವಣೆಯಲ್ಲಿ ”ನಾವು ಬಸವಣ್ಣನವರ ಅನುಯಾಯಿಗಳು. ಅವರ ಮಾರ್ಗದರ್ಶನದಲ್ಲೇ ಆಡಳಿತ ನಡೆಸುತ್ತಿದ್ದೇವೆ” ಎಂದು ಹೇಳುತ್ತಿರುವ ಬಿಜೆಪಿಗರು ಬಸವಣ್ಣನಿಗೆ ಮಾಡಿದ ಅಪಮಾನ ಮರೆಯದಿರಿ.#LingayatsAbusedByBJP pic.twitter.com/pmS8mO5O6H
— Karnataka Congress (@INCKarnataka) April 29, 2023
“>
ಲಿಂಗಾಯತರು ಕಾಂಗ್ರೆಸ್ ಪರ ಗಟ್ಟಿಯಾಗಿ ನಿಂತಿದ್ದಾರೆ. ಬಿಜೆಪಿಯ ಯಾವುದೇ ಗಿಮಿಕ್ಗಳನ್ನು ಲಿಂಗಾಯತರು ನಂಬುವುದಿಲ್ಲ. ನರೇಂದ್ರ ಮೋದಿ ಅವರೇ, ನಿಮ್ಮ ನೌಟಂಕಿ ಮಾತುಗಳು ಬಸವಣ್ಣನ ನಾಡಿನಲ್ಲಿ ನಡೆಯುವುದಿಲ್ಲ. ಲಿಂಗಾಯತರಿಗೆ ಬಿಜೆಪಿ ಎಸಗಿದ ದ್ರೋಹ ಅರ್ಥವಾಗಿದೆ, ಬಸವಣ್ಣನ ಭಕ್ತರು ಬಸವ ವಿರೋಧಿ ಬಿಜೆಪಿಗೆ ಜಾಗ ಕೊಡುವುದಿಲ್ಲ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿಯ ಲಿಂಗಾಯತ ದ್ವೇಷ ಲಿಂಗಾಯತ ನಾಯಕರ ಮೇಲಷ್ಟೇ ಅಲ್ಲ, ಐತಿಹಾಸಿಕ ವ್ಯಕ್ತಿಗಳ ಮೇಲೂ ಇದೆ. ಈ ಹಿಂದೆ ಸ್ವತಂತ್ರ ದಿನಾಚರಣೆಯ ಸಮಯದಲ್ಲಿ ಮಣೆಕ್ ಶಾ ಪರೇಡ್ ಮೈದಾನದ ಧ್ವಾರಕ್ಕೆ ಇದ್ದ ಕಿತ್ತೂರು ರಾಣಿ ಚೆನ್ನಮ್ಮ ಹೆಸರನ್ನು ತೆಗೆದುಹಾಕಿತ್ತು ಬಿಜೆಪಿ. ಪಠ್ಯದಲ್ಲಿ ಶರಣರ ವಚನಗಳನ್ನು ತೆಗೆದುಹಾಕಿದಂತೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.