Monday, September 16, 2024

ಪ್ರಾಯೋಗಿಕ ಆವೃತ್ತಿ

ಅ.13ರ ಮಹಿಷ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ: ಬಸ್ತಿ ರಂಗಪ್ಪ

ರಾಜ್ಯದ ಪ್ರಗತಿ ಪರ ಚಿಂತಕರು,ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ದಲಿತ ಸಂಘಟನೆಗಳು ಹಾಗೂ ಅಂಬೇಡ್ಕರ್ ಸಂಘಟನೆಗಳ ಸಹಯೋಗದಲ್ಲಿ ಇದೇ ಅ.13 ರ ಶುಕ್ರವಾರ ಮೈಸೂರಿನಲ್ಲಿ ನಡೆಯುವ ಮಹಿಷಾ ದಸರಾ ಮಹೋತ್ಸವಕ್ಕೆ ಕೆ.ಆರ್.ಪೇಟೆ ತಾಲ್ಲೂಕಿನ ಎಲ್ಲಾ ದಲಿತಪರ‌ ಸಂಘಟನೆಗಳು, ಅಂಬೇಡ್ಕರ್ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಂಘ, ಸಂಸ್ಥೆಗಳ ಮುಖ್ಯಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ  ಕಾರ್ಯಕ್ರಮ ವನ್ನು ಯಶಸ್ವಿಗೊಳಿಸುವಂತೆ ಕೆ.ಆರ್.ಪೇಟೆ ತಾಲ್ಲೂಕಿನ ದಲಿತ ಸಂಘಟನೆಗಳ ಹಿರಿಯ ಮುಖಂಡ ಬಸ್ತಿ ರಂಗಪ್ಪ ಮನವಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಹಿಷಾ ದಸರಾ ಮಹೋತ್ಸವ ಪೂರ್ವ ಭಾವಿಸಭೆಯಲ್ಲಿ ಮಾತನಾಡಿದರು.
ಕೆ.ಆರ್.ತಾಲ್ಲೂಕು ಛಲವಾದಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಊಚನಹಳ್ಳಿ ನಟರಾಜು ಮಾತನಾಡಿ, ಮೈಸೂರಿನ ಅಸ್ಮಿತೆಗಾಗಿ ಮಹಿಷ ದಸರಾ- 2023 ರಾಜ್ಯದ ಮೂಲನಿವಾಸಿಗಳಿಂದ ಮಹಿಷಾ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುವುದು ಎಂದರು.
ಅಂದು ಬೆಳಿಗ್ಗೆ ಪ್ರವಾಸಿ ಮಂದಿರಕ್ಕೆ 7ಗಂಟೆಗೆ ಕೆ.ಆರ್.ಪೇಟೆ ತಾಲ್ಲೂಕಿನ ದಲಿತ ಸಂಘಟನೆಗಳ ಮುಖ್ಯಸ್ಥರು ಹಾಜರಾಗಿ ಮೈಸೂರಿಗೆ ಹೊರಡಿ ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಹಾದ್ವಾರ ಬಳಿಯಿಂದ ಮೆರವಣಿಗೆ ಹೊರಡುವುದರಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ದಲಿತ ಸಂಘಟನೆಗಳ ಹಿರಿಯ ಮುಖಂಡ ಸಿಂಧಘಟ್ಟ ಸೋಮಸುಂದರ್, ಚಿಕ್ಕಗಾಡಿಗನಹಳ್ಳಿ ರಾಜಯ್ಯ,ಹರಿಹರಪುರ ನರಸಿಂಹ, ದೊಡ್ಡಸೋಮನಹಳ್ಳಿ ಮಂಜುನಾಥ್, ಸಂವಿಧಾನ ಬಳಗದ ಅಧ್ಯಕ್ಷ ಮುದುಗೆರೆ ಮಹೇಂದ್ರ, ಕರ್ನಾಟಕ ಭೀಮಸೇನೆ ತಾಲ್ಲೂಕು ಅಧ್ಯಕ್ಷ ಅಂಬೇಡ್ಕರ್ ನಗರ ಗಣೇಶ್, ಜಿಲ್ಲಾಧ್ಯಕ್ಷ ಜಕ್ಕನಹಳ್ಳಿ ರಾಜೇಶ್, ಅಲಂಬಾಡಿ ಕಾವಲ್ ಚನ್ನಕೃಷ್ಣ, ಬಸ್ತಿ ಪವಿಕುಮಾರ್, ಬೂಕನಕೆರೆ ತಮ್ಮಯ್ಯ ,ರಾಮು‌ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!