ಮಂಡ್ಯ ನಗರದ ಆಶೋಕನಗರ ಬಡಾವಣೆಯ ಗುರುದೇವ ಲಲಿತ ಕಲಾ ಅಕಾಡೆಮಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮೇಘ ಸಂದೇಶ ಭರತನಾಟ್ಯ ಪಯಾಣಾನುಭವದ ಪ್ರೇರಣಾ ಉಪನ್ಯಾಸ ನೃತ್ಯ ಪ್ರಾತ್ಯಕ್ಷಿತೆ ಹಾಗೂ ಕಾರ್ಯಾಗಾರವನ್ನು ನಾಟ್ಯ ವಿದುಷಿ ಡಾ.ಚೇತನ ಪಿ.ಎಂ.ರಾಧಾಕೃಷ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗುರುದೇವ ಲಲಿತ ಕಲಾ ಅಕಾಡಮಿಯಿಂದ ಮೇಘ ಸಂದೇಶ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಅಕಾಡೆಮಿಯಿಂದ ಕಲಿತು ಹೋದಂತಹ ಹಿರಿಯ ಕಲಾವಿದರನ್ನು ಕರೆದು ಅವರಿಂದ ನಾಟ್ಯ ಮಾಡಿಸಿ, ಪುಟ್ಟ ಮಕ್ಕಳಿಗೆ ಪ್ರೇರಣೆ ನೀಡಲು ಕಾರ್ಯಕ್ರಮ ರೂಪಿಸಲಾಗಿದ್ದು, ಅದರಂತೆ ಮೊದಲನೇ ಭಾರಿಗೆ ನಾಟ್ಯ ವಿದುಷಿ ಮೇಘ.ಪಿ. ರಾವ್ ಅವರಿಂದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಧಿರನ ಅಕಾಡೆಮಿ ಆಫ್ ಕ್ಲಾಸಿಕಲ್ ಡ್ಯಾನ್ಸ್ ಯು.ಎಸ್.ಎ. ನಿರ್ದೇಶಕಿ ನಾಟ್ಯ ವಿದುಷಿ ಮೇಘ.ಪಿ.ರಾವ್.(ಮೇಘ ಕಕ್ಕಿಲ್ಲಾಯ), ಪಿ.ಎಂ.ರಾಧಕೃಷ್ಣ ಹಾಗೂ ಭರತ ನಾಟ್ಯ ಕಲಾವಿದರು ಹಾಜರಿದ್ದರು.