ರಾಷ್ಟ್ರೀಯ ರಸ್ತೆ ಸುರಕ್ಷತಾ ಪಾಕ್ಷಿಕ 2023ರ ಯುವಪಡೆ ಜಾಥಾಗೆ ಮಾನ್ಯ ಮಂಡ್ಯ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಶುಭ ಹಾರೈಸಿ ಚಾಲನೆ ನೀಡಿದರು.
ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಡೆಯಬಹುದು.ಪ್ರತಿಯೊಬ್ಬರೂ ರಸ್ತೆ ಸುರಕ್ಷತೆಯ ಬಗ್ಗೆ ಅರಿತು ಅದರಂತೆ ನಡೆಯಬೇಕೆಂದು ಕರೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿವೇಕಾನಂದ, ಮೋಟಾರು ವಾಹನ ನಿರೀಕ್ಷಕರಾದ ಕೆ. ಜವರಯ್ಯ, ಸೈಫುದ್ಧೀನ್ ಖಾನ್ ಮತ್ತಿತರರು ಹಾಜರಿದ್ದು ಜಾಥಾವನ್ನು ಮುನ್ನಡೆಸಿದರು.
ಜಿಲ್ಲಾಧಿಕಾರಿ ಆವರಣದಿಂದ ಸಾಗಿದ ಯುವ ಪಡೆಯಿಂದ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ಘೋಷಣೆ ಕೂಗುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.