ಭಾರತ ಸೇವಾ ದಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ಭಾವೈಕ್ಯತೆ ಮೇಳ ಕಳೆದ ಮೂರು ದಿನಗಳಿಂದ ಆಯೋಜನೆಗೊಂಡಿದ್ದು, ಅದರ ಮುಕ್ತಾಯ ಸಮಾರಂಭ ಶನಿವಾರ ನಡೆಯಿತು.
ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ಇಂದಿರಾ ಗಾಂಧಿ ಮೊರಾರ್ಜಿ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ಉಪ ಪ್ರಾಂಶುಪಾಲರಾದ ಸುಜಾತ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ದೇಶದ ಭಾವೈಕ್ಯತೆ ದೇಶಪ್ರಮ ಬಗ್ಗೆ, ಮಕ್ಕಳಲ್ಲಿ ಶಿಸ್ತು, ಬದ್ಧತೆ, ಶಾಲಾ ಬ್ಯಾಂಡ್ ವಾದನ ಬಗ್ಗೆ ಅರ್ಥಪೂರ್ಣವಾಗಿ ತರಬೇತಿ ಮತ್ತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ದಳಪತಿ ಸ್ವಾಮಿ, ಜಿಲ್ಲಾ ಭಾರತ ಸೇವಾ ದಳದ ಸಂಘಟಕ ಗಣೇಶ್, ತಾಲೂಕು ಶಾಖಾ ನಾಯಕ ಭೈರೇಗೌಡ, ರಾಮಚಂದ್ರ, ಶ್ರೀಧರ್, ವಸಂತ್ ಕುಮಾರ್, ಶಿಕ್ಷಕ ತಿಮ್ಮೇಶ್, ಮಹೇಶ್, ಶ್ರೀನಿವಾಸ್ಮೂರ್ತಿ ,ಕೃಷ್ಣ, ಪುಷ್ಪ, ಆರೋಗ್ಯ ಸಹಾಯಕಿ ಸುಜಾತ, ಎಮ್. ಮೀನಾಕ್ಷಿ, ಸಿಬ್ಬಂದಿ ವರ್ಗದ ಅರುಣ್ ಉಪಸ್ಥಿತರಿದ್ದರು.