ಮಂಡ್ಯ ನಗರದ ಚಾಮುಂಡೇಶ್ವರಿ ನಗರದಲ್ಲಿರುವ ಬೇಕ್ ಪಾಯಿಂಟ್ನಲ್ಲಿ ವಿವಿಧ ರೀತಿಯ ಕೇಕ್ಗಳನ್ನು ತಯಾರಿಸಿ 2023 ರ ಹೊಸ ವರ್ಷಾಚರಣೆಗೆ ಸಮರ್ಪಿಸುತ್ತಿರುವುದು ಸಂತಸ ತಂದಿದೆ ಎಂದು ಮನ್ಮುಲ್ ಅಧ್ಯಕ್ಷ ರಾಮಚಂದ್ರು ಹೇಳಿದರು.
ಇಂದು ಬೇಕ್ಪಾಯಿಂಟ್ ಆವರಣದಲ್ಲಿ ನಡೆದ 2023ರ ಕೇಕ್ ಜಾತ್ರೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೂತನ ವರ್ಷ ಆಚರಿಸುವ ಯುವ ಜನತೆ ಹಾಗೂ ಮನೆಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವವರಿಗೆ ವಿವಿಧ ಬಗೆಯ ಕೇಕ್ಗಳು ಇಲ್ಲಿ ಲಭ್ಯವಿವೆ.ಇದೊಂದು ಖುಷಿ ಕೊಡುವ ವಿಚಾರ ಎಂದರು.
ಮಂಡ್ಯದಲ್ಲಿ ವ್ಯವಸಾಯ ಮಾಡುವುದೇ ಆಗಿದೆ. ಹಾಸನದವರು ಮಾತ್ರ ಬೇಕರಿ ಮಾಡುತ್ತಾರೆ, ಒಂದೊಂದು ಕಡೆ ಒಂದು ವೃತ್ತಿ ಮಾಡುತ್ತಾರೆ.ನಾವು ಸಹ ಮಂಡ್ಯದವರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ನುಡಿದರು.
ಉದ್ಯಮದಲ್ಲಿ ಸಾಧನೆ ಮಾಡಿ ತೋರಿಸಿದ ಬೇಕ್ ಪಾಂಯಿಟ್ ಅರವಿಂದ್ ಅವರಿಗೆ ಒಳ್ಳಯದಾಗಲಿ, 22ವರ್ಷದಿಂದಲೂ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಒಳ್ಳೆ ಒಳ್ಳೆ ಸಿಹಿತಿನಿಸು, ಕೇಕ್ಗಳನ್ನು ಗ್ರಾಹಕರಿಗೆ ತಕ್ಕಂತೆ ನೀಡುತ್ತಿದ್ದಾರೆ ಎಂದು ಹೇಳಿದರು.
ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ಮುಖಂಡ ಬೇಕ್ಪಾಯಿಟ್ ಎಚ್.ಆರ್.ಅರವಿಂದ್ ಮಾತನಾಡಿ, ಗ್ರಾಹಕರ ಮನಸೆಳೆಯುವ ನಾನಾ ಕೇಕ್ಗಳು ಸಿದ್ದವಾಗಿವೆ. ಪ್ರತಿ ವರ್ಷ ಹೊಸ ವರ್ಷಾಚರಣೆ ಮಾಡುವ ಯುವಜನತೆಗೆ ಒಪ್ಪುವ ಕೇಕ್ಗಳು, ವಿವಿಧ ವಿನ್ಯಾಸ, ಬಣ್ಣ ರುಚಿಗಳಲ್ಲಿ ತಯರಾಗಿವೆ ಎಂದು ನುಡಿದರು.
ಹನಿಕೇಕ್ , ಕ್ರೀಮ್ ಕೇಕ್, ಪೇಸ್ಟ್ರಿ,ಕೇಕ್ಗಳಿವೆ. ಒಂದೊಂದು ಶ್ರೇಣಿಯಲ್ಲೂ 9 ರೀತಿಯ ವಿಧಾನದ ಕೇಕ್ ಗಳು ತಯಾರಾಗಿವೆ. ಗ್ರಾಹಕರಿಗೆ ಯಾವ ರೀತಿ ಬೇಕೋ ಆದೇ ರೀತಿ ಸಿದ್ದವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ , ವಿವೇಕ್, ಹರ್ಷ, ಪ್ರಸನ್ನ, ಚಂದ್ರು ಮತ್ತಿತರರಿದ್ದರು.