ಮಂಡ್ಯದ ಕಾರಸವಾಡಿಯ ರಸ್ತೆಯಲ್ಲಿ ಕಾರು -ಆಟೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಆಟೋ ಚಲಿಸುತ್ತಿದ್ದ ಕಾಳಶೆಟ್ಟಿಯವರ ಪುತ್ರ, ಕಾರಸವಾಡಿ ನಿವಾಸಿ ಡಾಬಾ ಸುರೇಶ್ (39) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮಹದೇಶ್ವರ ಬಡಾವಣೆಯಲ್ಲಿರುವ ಕಾರಸವಾಡಿ ರಸ್ತೆಯಲ್ಲಿ ಸುರೇಶ್ ಅವರ ಡಾಬಾದ ಮುಂದೆಯೇ ಈ ಘಟನೆ ಸುಮಾರು 9.45ರ ರಾತ್ರಿ ಜರುಗಿದ್ದು, ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಗದ್ಧೆಯಲ್ಲಿ ಹೋಗಿ ಬಿದ್ದಿದ್ದೆ ಎನ್ನಲಾಗುತ್ತಿದೆ.
ಈ ರಭಸದ ಹೊಡೆತಕ್ಕೆ ಸ್ಥಳದಲ್ಲೇ ಡಾಬಾ ಸುರೇಶ್ ಅವರು ಮೃತಪಟ್ಟಿದ್ದು, ಮೃತ ಸುರೇಶ್ ಅವರು ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿ ಶೃತಿಯವರನ್ನು (31 ) ಅಗಲಿದ್ದಾರೆ.
ಕಾರಿನಲ್ಲಿದ್ದ ದಂಪತಿ ಮತ್ತು ಮಗುವಿಗೆ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.