Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾರು -ಆಟೋ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಡಾಬಾ ಸುರೇಶ್ ದುರ್ಮರಣ

ಮಂಡ್ಯದ ಕಾರಸವಾಡಿಯ ರಸ್ತೆಯಲ್ಲಿ ಕಾರು -ಆಟೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಆಟೋ ಚಲಿಸುತ್ತಿದ್ದ ಕಾಳಶೆಟ್ಟಿಯವರ ಪುತ್ರ, ಕಾರಸವಾಡಿ ನಿವಾಸಿ ಡಾಬಾ ಸುರೇಶ್ (39) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮಹದೇಶ್ವರ ಬಡಾವಣೆಯಲ್ಲಿರುವ ಕಾರಸವಾಡಿ ರಸ್ತೆಯಲ್ಲಿ ಸುರೇಶ್ ಅವರ ಡಾಬಾದ ಮುಂದೆಯೇ ಈ ಘಟನೆ ಸುಮಾರು 9.45ರ ರಾತ್ರಿ ಜರುಗಿದ್ದು, ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಗದ್ಧೆಯಲ್ಲಿ ಹೋಗಿ ಬಿದ್ದಿದ್ದೆ ಎನ್ನಲಾಗುತ್ತಿದೆ.

ಈ ರಭಸದ ಹೊಡೆತಕ್ಕೆ ಸ್ಥಳದಲ್ಲೇ ಡಾಬಾ ಸುರೇಶ್ ಅವರು ಮೃತಪಟ್ಟಿದ್ದು, ಮೃತ ಸುರೇಶ್ ಅವರು ಇಬ್ಬರು ಹೆಣ್ಣು ಮಕ್ಕಳು  ಮತ್ತು  ಪತ್ನಿ ಶೃತಿಯವರನ್ನು (31 ) ಅಗಲಿದ್ದಾರೆ.

ಕಾರಿನಲ್ಲಿದ್ದ ದಂಪತಿ ಮತ್ತು ಮಗುವಿಗೆ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!