ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವನ್ನು ಜೆಡಿಎಸ್ ನಾಯಕರು ಸರ್ಮಥನೆ ಮಾಡ್ಕೊಳ್ಳಕ್ಕೆ ಮುಂದಾಗಿದ್ದಾರೆ, ಅವರು ಪ್ರಜ್ವಲ್ ನ ಕರೆಸುತ್ತಾರೋ ಬಿಡ್ತಾರೋ ಅವರಿಗೆ ಬಿಟ್ಟ ವಿಚಾರ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಇವಾಗಲು ಬಹಳಷ್ಟು ಡಿಪೆಂಡ್ ಮಾಡ್ಕೊಳ್ತಿದ್ದಾರೆ. ‘ಒಂದಲ್ಲ ಒಂದು ರೀತಿ ಜೆಡಿಎಸ್-ಬಿಜೆಪಿ ಪಕ್ಷಗಳು ಪ್ರಜ್ವಲ್ ನ ಸೇವ್ ಮಾಡ್ತಿದ್ದಾರೆ, ಇದು ಸರಿಯಲ್ಲ ಎಂದರು.
ಮಾಜಿ ಪ್ರಧಾನಿ ದೇವೇಗೌಡ್ರು ಪ್ರಜ್ವಲ್ ಗೆ ಎಚ್ಚರಿಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಅದರ ಬಗ್ಗೆ ಮಾತನಾಡಬಾರದು ಅನ್ನೋ ತೀರ್ಮಾನ ತೆಗೆದುಕೊಂಡಿದ್ದೇವೆ. ಅದನ್ನ ಬೆಂಬಲಿಸುವವರು ಹೆಚ್ಚಾಗಿದ್ದಾರೆ ಅದು ಬಗ್ಗೆ ಸೂಕ್ತ ಅಲ್ಲ. ಕುಮಾರಸ್ವಾಮಿ ಹಾಗೂ ಅವರ ಕುಟುಂಬಕ್ಕೆ ದೇವರು ಒಳ್ಳೆಯದನ್ನ ಮಾಡಲಿ ಎಂದರು.
ಇದು ದೊಡ್ಡ ಅಪರಾಧ ಅಲ್ಲ ಅನ್ನೋ ತರ ಕೆಲವರು ಮಾತನಾಡ್ತಿದ್ದಾರೆ. ಮಾಡಿದವನು, ಕುಟುಂಬನ ಬೀದಿಗೆ ತಂದವನು ತಪ್ಪಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ದಾರಿಯಲ್ಲಿ ಪೆನ್ ಡ್ರೈವ್ ಸಿಕ್ಕಿದನ್ನ ಯಾರು ಹಂಚಿದ್ರು ಅವರು ಮೇಲೆಯೂ ಕ್ರಮ ಆಗಲಿ, ಆದರೆ ಕುಮಾರಸ್ವಾಮಿ ಅವರು ನೇರವಾಗಿ ಡಿ.ಕೆ.ಶಿವಕುಮಾರ್ ಬಗ್ಗೆ ಆರೋಪ ಮಾಡುವುದು ಹಾಗೂ ಮಾತನಾಡುವುದು ಗೌರವ ಅಲ್ಲ ಎಂದು ತಿಳಿಸಿದರು.