Thursday, September 19, 2024

ಪ್ರಾಯೋಗಿಕ ಆವೃತ್ತಿ

ಚೆಲುವರಾಜು ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ

ಕಾಂಗ್ರೆಸ್ ಮುಖಂಡ ತೈಲೂರು ಚೆಲುವರಾಜು ಅವರ ಹುಟ್ಟುಹಬ್ಬವನ್ನು ವಿವಿಧ ಸಮಾಜಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಮದ್ದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಮುಖಂಡ ತೈಲೂರು ಚೆಲುವರಾಜು ಹುಟ್ಟು ಹಬ್ಬದ ಹಿನ್ನೆಲೆ ಚೆಲುವರಾಜು ಅಭಿಮಾನಿ ಬಳಗದವರು ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೊರರೋಗಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಮಂಡ್ಯದ ಮಮತೆಯ ಮಡಿಲು ಹಾಗೂ ಬೋರಾಪುರ ಅನಾಥಾಶ್ರಮದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.  ಮುದುಗೆರೆ ಗ್ರಾಮದ ವಯೋವೃದ್ಧರ ಆಶ್ರಮಕ್ಕೆ ಆರ್ಥಿಕ ಧನಸಹಾಯ ನೀಡಲಾಯಿತು. ಪ್ರೇರಣಾ ಸಂಸ್ಥೆ ಜೊತೆಗೆ ಆಶ್ರಯ ಧಾಮಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು. ತೈಲೂರು ಗ್ರಾಮದ ತೈಲೂರಮ್ಮನ ದೇವಾಲಯದ ಬಳಿ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಕಬ್ಬಾರೆ ಗ್ರಾ ಪಂ ಸದಸ್ಯ ರಘು, ತೈಲೂರು ಸಂತೋಷ್, ಅಪ್ಪಾಜಿ ಸೇರಿದಂತೆ ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!