Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಳೆ ಚುಂಚಶ್ರೀಗಳ ಸಾನಿಧ್ಯದಲ್ಲಿ ನಾಗಣ್ಣ ಬಾಣಸವಾಡಿಗೆ ಶ್ರದ್ಧಾಂಜಲಿ

ನಾಗಣ್ಣಬಾಣಸವಾಡಿ ಯವರ ನಿಧನಕ್ಕೆ ಸಂತಾಪ ಹಾಗೂ ಶ್ರದ್ದಾಂಜಲಿ ಸಭೆಯ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರು ವಹಿಸಲಿದ್ದಾರೆ.

ನಾಳೆ ದಿ 31-3-2023 ರಂದು ಶುಕ್ರವಾರ 10:30 ಕ್ಕೆ ರೈತ ಸಭಾಂಗಣದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಲಿದೆ.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷರು, ಒಕ್ಕಲಿಗರ ಸೇವಾಟ್ರಸ್ಟ್ ಅಧ್ಯಕ್ಷರು ಆಗಿದ್ದ ನಾಗಣ್ಣ ಬಾಣಸವಾಡಿ ಅವರು ಗ್ರಾ. ಪಂ. ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷರಾಗಿಯು ಕೆಲಸ ನಿರ್ವಹಿಸಿದ್ದರು.

ಅಧಿಕಾರ ವಿಕೇಂದ್ರಿಕರಣಪರ ಹಕ್ಕೊತ್ತಾಯ, ಅಹಿಂಸಾ ಸಂಘಟನೆಯ ಮೂಲಕ ನ್ಯಾಯಯುತ ಪದೋನ್ನತಿ ಹಾಗೂ ಉತ್ತರ ಕರ್ನಾಟಕದ ಭಾಗದ ಕುಡು ಒಕ್ಕಲಿಗರನ್ನು ಮುಖ್ಯವಾಹಿನಿಗೆ ತರುವಲ್ಲಿ ನಾಗಣ್ಣರವರ ಶ್ರಮ ಆಪಾರವಾಗಿತ್ತು.

ಒಕ್ಕಲಿಗರ ಸರ್ವಾಂಗೀಣ ಅಭಿವೃದ್ಧಿಯ ಕನಸೊತ್ತು ಜೀವನವಿಡಿ ಶ್ರಮಿಸಿದ ನಾಗಣ್ಣ ಬಾಣಸವಾಡಿಯವರನ್ನು ಸ್ಮರಿಸುವ ಹಾಗೂ ಗೌರವರ್ಪಣೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಆ ಕಾರಣಕ್ಕಾಗಿ ನಾಗಣ್ಣ ಅವರ ಶ್ರದ್ದಾಂಜಲಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಬೇಕೆಂಬ ಅಭಿಲಾಷೆಯನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಆಶೋಕ್ ಜಯರಾಮ್ ಅಭಿಪ್ರಾಯಪಟ್ಟರು.

ಮಂಡ್ಯದ ಸುಭಾಷ್ ನಗರದ‌ ಬಳಿ ಇರುವ ಆದಿ ಚುಂಚನಗಿರಿ‌ ಕಟ್ಟಡದ ಒಕ್ಕಲಿಗ ಸೇವಾ ಟ್ರಸ್ಟ್ ಕಛೇರಿಯಲ್ಲಿ
ಟ್ರಸ್ಟ್ ನಿರ್ದೇಶಕ ಶಿವಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!