ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಥವಾ ಅಭಿವೃದ್ದಿ ನಿಗಮಕ್ಕೆ ಸಮಾಜದ ಮುಖಂಡರಾಗಿರುವ ಆರ್.ಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗರಾಜು ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಅತೀ ಕಡೆಯ ಸಮುದಾಯವಾಗಿರುವ ಆರುಂಧತಿಯಾರ್ ಸಮಾಜದ ಮುಖಂಡರು ಶ್ರೀರಂಗಪಟ್ಟಣ ಪುರಸಭೆಯ ಮಾಜಿ ಅಧ್ಯಕ್ಷರಾದ ಆರ್.ಕೃಷ್ಣ ಅವರ ನಿರಂತರ ಹೋರಾಟ ಹಾಗೂ ಸಂಘಟನೆಯನ್ನು ಮನಗಂಡು ರಾಜ್ಯ ಸರ್ಕಾರ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಸಮಾಜ ಅಭ್ಯುದಯಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಬಿ.ಗಣೀಶ್, ವಿಜಯನ್, ಮುತ್ತು, ಗೌರಮ್ಮ, ಕವಿತಾ, ಮಹದೇವ ಇತರರು ಉಪಸ್ಥಿತರಿದ್ದರು.