ಕಬ್ಬಿನ ಬೆಲೆ ನಿಗದಿ ಮಾಡದ ಕರ್ನಾಟಕ ಸರ್ಕಾರದ ನಡೆ ಖಂಡಿಸಿ ಮದ್ದೂರಿನ ಜನಸಂಕಲ್ಪ ಯಾತ್ರೆ ವೇಳೆ ಮುಖ್ಯಮಂತ್ರಿಗೆ ಕಪ್ಪು ಬಾವುಟ ತೋರಿಸಲು ಮುಂದಾಗಿದ್ದ ತೆಂಗು ಬೆಳೆಗಾರರ ಸಂಘದ ರಾಜ್ಯಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಮದ್ದೂರಿನ ಗೊರವನಹಳ್ಳಿ ಸರ್ಕಲ್ ನಲ್ಲಿದ್ದ ಲಕ್ಷಣ್ ಅವರನ್ನು ಸಬ್ ಇನ್ಸ್ಪೆಕ್ಟರ್ ಉಮೇಶ್ ರವರು, ಹೆಲಿಪ್ಯಾಡ್ ನಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿ ಕೊಡುವುದಾಗಿ ತಪ್ಪು ಮಾಹಿತಿ ನೀಡಿ ಕರೆದೊಯ್ದು, ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಇರಿಸಿದ್ದಾರೆಂದು ತಿಳಿದು ಬಂದಿದೆ.
ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸುವುದಾಗಿ ಹೇಳಿಕೆ ನೀಡಿದ್ದ ಲಕ್ಷ್ಮಣ್ ಅವರನ್ನು ಮಧ್ಯಾಹ್ನ ಹನ್ನೆರಡೂವರೆ ಗಂಟೆ ವೇಳೆ ಪೊಲೀಸರು ಬಂಧಿಸಿದರು. ಈ ಹಿಂದೆ ಚನ್ನಸಂದ್ರ ಲಕ್ಷಣ್ ಅವರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮದ್ದೂರಿನಲ್ಲಿ ಕಪ್ಪುಬಾವುಟ ತೋರಿ ಪ್ರತಿಭಟನೆ ಮಾಡಿದ್ದರು.