ಮೋದಿಯವರಿಗೆ ದಮ್ಮು ತಾಕತ್ತಿದ್ದರೆ ಭಾರತದ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡುವ ಬದಲು, ಭಾರತವನ್ನು ಆಕ್ರಮಿಸಿರುವ ಚೀನಾ ಮೇಲೆ ದಾಳಿ ಮಾಡಲಿ… ಕನಿಷ್ಠ ಪಕ್ಷ “ಚೀನಾ” ಎಂದು ಹೆಸರು ಹೇಳಿ ವಾಗ್ದಾಳಿಯನ್ನಾದರೂ ಮಾಡಲಿ! ಎಂದು ಕಾಂಗ್ರೆಸ್ ಸವಾಲ್ ಹಾಕಿದೆ.
ಅದಾನಿ ಕಂಪೆನಿಯಲ್ಲಿ ಚೀನಾದವರ ಹೂಡಿಕೆ ಇದೆ, “ಅದಾನಿ ಚೀನಿ ಬಾಯಿ ಬಾಯಿ” ಎನ್ನುವಂತಿದೆ.@narendramodi ಅವರೇ,
ಅದಾನಿ ಕಂಪೆನಿ ಮೇಲೆ ಇಡಿ ದಾಳಿ ಮಾಡುವುದು ಯಾವಾಗ?ನಿಮ್ಮ ಗೆಳೆಯನ ಹಿತಕ್ಕಾಗಿ ಚೀನಾದ ಅತಿಕ್ರಮಣ ನೋಡಿ ಸುಮ್ಮನಿದ್ದೀರಾ? ಭಾರತದ ಭೂಮಿಯನ್ನು ಬಲಿ ಕೊಡುತ್ತಿದ್ದೀರಾ? pic.twitter.com/BuW7E8fogD
— Karnataka Congress (@INCKarnataka) October 7, 2023
“>
ಚೀನಾ ಕಂಪೆನಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಆರೋಪಿಸಿ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡಲಾಗಿದೆ. ಚೀನಾ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸುವುದು ಅಪರಾಧವೆಂದಾದರೆ ಮೊದಲು ಅಪರಾಧಿ ಸ್ಥಾನದಲ್ಲಿ ಮೋದಿಯೇ ನಿಲ್ಲುತ್ತಾರೆ. ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ಹಣ ಸಂಗ್ರಹಿಸಲಾಗಿದೆ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಬರೆದು ಪೋಸ್ಟ್ ಮಾಡಿದೆ.
ಚೀನಾ ಕಂಪೆನಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಆರೋಪಿಸಿ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದಾಳಿ ಮಾಡಲಾಗಿದೆ.
ಚೀನಾ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸುವುದು ಅಪರಾಧವೆಂದಾದರೆ ಮೊದಲು ಅಪರಾಧಿ ಸ್ಥಾನದಲ್ಲಿ ಮೋದಿಯೇ ನಿಲ್ಲುತ್ತಾರೆ.
ಪಿಎಂ ಕೇರ್ಸ್ ಎಂಬ ಗೋಲ್ಮಾಲ್ ನಿಧಿಗೆ ಚೀನಾ ಕಂಪೆನಿಗಳಿಂದ ಕೋಟಿ ಕೋಟಿ ಹಣ ಸಂಗ್ರಹಿಸಲಾಗಿದೆ.… pic.twitter.com/C1YLLyghTc
— Karnataka Congress (@INCKarnataka) October 7, 2023
“>
ಸರ್ದಾರ್ ಪಟೇಲರ ಪ್ರತಿಮೆ ನಿರ್ಮಾಣದ ಹೊಣೆಯನ್ನು ಚೀನಾ ಕಂಪೆನಿಗೆ ನೀಡಿದ್ದು ಕೂಡ ಕೇಂದ್ರ ಸರ್ಕಾರವೇ. ಅದಾನಿ ಕಂಪೆನಿಯಲ್ಲಿ ಚೀನಾದವರ ಹೂಡಿಕೆ ಇದೆ, “ಅದಾನಿ ಚೀನಿ ಬಾಯಿ ಬಾಯಿ” ಎನ್ನುವಂತಿದೆ. ನರೇಂದ್ರ ಮೋದಿ ಅವರೇ, ಅದಾನಿ ಕಂಪೆನಿ ಮೇಲೆ ಇಡಿ ದಾಳಿ ಮಾಡುವುದು ಯಾವಾಗ? ನಿಮ್ಮ ಗೆಳೆಯನ ಹಿತಕ್ಕಾಗಿ ಚೀನಾದ ಅತಿಕ್ರಮಣ ನೋಡಿ ಸುಮ್ಮನಿದ್ದೀರಾ? ಭಾರತದ ಭೂಮಿಯನ್ನು ಬಲಿ ಕೊಡುತ್ತಿದ್ದೀರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.